Ad imageAd image

ಶಾಲಾ ಆವರಣದಲ್ಲಿ ಗಂಧದ ಮರ ಕದ್ದೊಯ್ದ ಕಳ್ಳರು

Bharath Vaibhav
ಶಾಲಾ ಆವರಣದಲ್ಲಿ ಗಂಧದ ಮರ ಕದ್ದೊಯ್ದ ಕಳ್ಳರು
WhatsApp Group Join Now
Telegram Group Join Now

ಮೈಸೂರು ಸಮೀಪದ ಸರ್ಕಾರಿ ಪ್ರೌಢಶಾಲಾವರಣದಲ್ಲಿದ್ದ ಗಂಧದ ಮರಗಳ ಮೇಲೂ ಕಳ್ಳರು ಕಣ್ಣಿಟ್ಟು ಕದ್ದೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಘಟನೆ ನಡೆದಿದ್ದು- ಎರಡು ದಿನ ರಜೆ ಇದ್ದ ಹಿನ್ನೆಲೆ ಸೋಮವಾರ ಬೆಳಗ್ಗೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಯ ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಸೆರೆಯಾಗಿದ್ದು ನಾಲ್ಕು ಮಂದಿ ಖದೀಮರು ಈ ಕೃತ್ಯ ಎಸಗಿದ್ದಾರೆ.

ಶಾಲಾವರಣದಲ್ಲಿ ಒಟ್ಟು 26 ಶ್ರೀಗಂಧದ ಮರಗಳನ್ನು ಬೆಳೆಸಲಾಗಿತ್ತು. ಇವುಗಳಲ್ಲಿ, 3 ನ್ನು ಕತ್ತರಿಸಿದ್ದು ಒಂದು ಮರವನ್ನು ಕದ್ದೊಯ್ದಿದ್ದಾರೆ. ಕಳ್ಳರನ್ನು ಶೀಘ್ರವೇ ಪತ್ತೆಹಚ್ಚಿ, ಮುಂದೆ ಈ ರೀತಿ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ: ಆನಂದ್ ಕುಮಾರ್  ವಡಗೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!