Ad imageAd image

ಹುಟ್ಟು ಹಬ್ಬದಂದೇ ದುರಂತ ಅಂತ್ಯ ಕಂಡ ಮೂವರು ಸ್ನೇಹಿತರು 

Bharath Vaibhav
ಹುಟ್ಟು ಹಬ್ಬದಂದೇ ದುರಂತ ಅಂತ್ಯ ಕಂಡ ಮೂವರು ಸ್ನೇಹಿತರು 
DEATH
WhatsApp Group Join Now
Telegram Group Join Now

ಗದಗ : ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರು ಪಾಲದ ಘೋರ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರಲಹಳ್ಳಿಯಲ್ಲಿ ನಡೆದಿದೆ.ಮೃತರನ್ನು ಶರಣಪ್ಪ ಬಡಿಗೇರ್ (34) ಮಹೇಶ್ (36) ಹಾಗೂ ಗುರುನಾಥ (38) ಎಂದು ಗುರುತಿಸಲಾಗಿದೆ.

ಇಂದು ಶರಣಪ್ಪ ಬಡಿಗೇರ್ ಹುಟ್ಟುಹಬ್ಬವಿದ್ದ ಪ್ರಯುಕ್ತ ದೇಗುಲ ಭೇಟಿ ನಿರ್ಧರಿಸಿದ ಐವರು ಸ್ನೇಹಿತರ ತಂಡ ಮುಂಡರಗಿಗೆ ಬಂದಿತ್ತು.ಶಿರಹಟ್ಟಿಯಿಂದ ಬಂದಿದ್ದ ಸ್ನೇಹಿತರ ತಂಡ ಮುಂಡರಗಿಯ ಆಂಜನೇಯನ ದರ್ಶನ ಪಡೆದು ಈಜಲು ತುಂಗಭದ್ರಾ ನದಿಗೆ ಇಳಿದಿದ್ದಾರೆ.

ಈ ವೇಳೆ ಈಜಲು ಬಾರದಿದ್ದರೂ ಕೂಡ ಮಹೇಶ್ ನದಿಗೆ ಇಳಿದಿದ್ದಾನೆ. ನದಿಯಲ್ಲಿ ಈಜಲಾಗದೇ ಮಹೇಶ್ ಕೊಚ್ಚಿಕೊಂಡು ಹೋಗುತ್ತಿದ್ದದ್ದನ್ನು ಕಂಡ ಶರಣಪ್ಪ ಮತ್ತು ಗುರುನಾಥ್ ಆತನನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ.

ದುರದೃಷ್ಟವಶಾತ್‌ ಸ್ನೇಹಿತನನ್ನು ಕಾಪಾಡಲಿ ನದಿಗೆ ಇಳಿದ ಶರಣಪ್ಪ, ಗುರುನಾಥ್‌ ಸೇರಿ ಮಹೇಶ್‌ ಕೂಡಾ ನೀರುಪಾಲಾಗಿದ್ದಾರೆ. ಮೃತರಿಗಾಗಿ ಶೋಧಕಾರ್ಯ ನಡೆಯುತ್ತಿದ್ದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಮೀನುಗಾರರಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!