Ad imageAd image

ಹೀಗೊಬ್ಬ ಕುಡುಕನ ಅವಾಂತರ

Bharath Vaibhav
ಹೀಗೊಬ್ಬ ಕುಡುಕನ ಅವಾಂತರ
WhatsApp Group Join Now
Telegram Group Join Now

ಬೆಳಗಾವಿ,: ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಕೆಎಸ್​​ಆರ್​​ಟಿಸಿ ಬಸ್ ಚಕ್ರದಡಿ ಮಲಗಿ ದೊಡ್ಡ ಅವಾಂತರ ಸೃಷ್ಟಿಸಿದ್ದಾನೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕೆಂಗಾನೂರಿನಲ್ಲಿ ಘಟನೆ ನಡೆದಿದೆ. ವಿಠ್ಠಲ್ ಗಾಣಿಗೇರ(24) ಎನ್ನುವ ವ್ಯಕ್ತಿ ಎಣ್ಣೆ ಹೊಡೆದು ಫುಲ್ ಟೈಟ್​​ ಆಗಿ ಬಳಿಕ ಬಸ್ ಕೆಳಗೆ ಬಂದು ಮಲಗಿದ್ದಾನೆ. ಆಚೆ ಬಾ ಅಂದರೂ ಯಾವುದನ್ನು ತಲೆ ಕೆಡಿಸಿಕೊಳ್ಳದೇ ಆಯಾಗಿ ಮಲಗಿದ್ದಾನೆ. ಬಳಿಕ ಬಸ್ ಚಾಲಕ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಸ್ ಕೆಳೆಗೆ ಮಲಗಿದ್ದ ವಿಠ್ಠಲ್ ಗಾಣಿಗೇರನನ್ನು ಆಚೆ ಬರುವಂತೆ ಹೇಳಿದ್ದಾರೆ. ಆದರೂ ಪೊಲೀಸರ ಮಾತಿಗೆ ಡೋಂಟ್ ಕೇರ್ ಎಂದಿದ್ದಾನೆ. ಇದರಿಂದ ಕುಡುಕನ ಕಾಟಕ್ಕೆ ಪೊಲೀಸರು, ಪ್ರಯಾಣಿಕರು, ಕಂಡಕ್ಟರ್ , ಡ್ರೈವರ್ ಹೈರಾಣಾಗಿದ್ದಾರೆ

WhatsApp Group Join Now
Telegram Group Join Now
Share This Article
error: Content is protected !!