Ad imageAd image

ಇಂದು ಐಗಳಿ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸ.

Bharath Vaibhav
WhatsApp Group Join Now
Telegram Group Join Now

ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ಪ್ರತಿಷ್ಠಿತ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸ ನಾಳೆ ಮಂಗಳವಾರ ರಂದು ಜರುಗಲಿದೆ ನಾಳೆ ಮುಂಜಾನೆ ಶ್ರೀದುರ್ಗಾದೇವಿಗೆ ಪೂಜಾರಿಗಳಿಂದ ವಿಶೇಷ ಅಭಿಷೇಕ ಪೂಜೆ ಹಾಗೂ ಮಹಾ ನೈವೇದ್ಯ ನೀಡುವುದು ನಂತರ ಪಲ್ಲಕ್ಕಿ ಉತ್ಸವ ಜರುಗುವುದು. ಸಂಜೆ ನೌಕರರ ಬಳಗದ ವತಿಯಿಂದ ಜಾತ್ರಾ ನಿಮಿತ್ತವಾಗಿ ಶಿವರಾಜ ಮೆಲೇಡಿಸ್ ಕಲಾತಂಡ ಬೆಳಗಾವಿ ಇವರಿಂದ ಹಾಸ್ಯ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಗ್ರಾಮದ ಅಗಸಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶಕುಂತಲಾ ಪಾಟೀಲ ಹಾಗೂ ಐಪಿಎಸ್ ಅಧಿಕಾರಿ ರವೀಂದ್ರ ಗಡಾದೆ. ತುಕಾರಾಮ ಝುಂಜರವಾಡ ತೋಟಗಾರಿಕೆ ಇಲಾಕೆ ಬೆಳಗಾವಿ. ಸುರೇಶ ಶಿಂಗಿ ಸಿಪಿಐ. ಗ್ರಾಮದ ಮುಖಂಡರಾದ ಸಿ ಎಸ್ ನೇಮಗೌಡ. ಬಸಗೌಡ ಬಿರಾದಾರ ಶಿವಾನಂದ ಸಿಂಧೂರ ಶಂಕರಗೌಡ ಪಾಟೀಲ ಅಪ್ಪಸಾಬ ಪಾಟೀಲ ಮನೋಹರ ಝುಂಜರವಾಡ. ರಾಜಕೀಯ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತರು ಮುಂತಾದವರು ಭಾಗಿಯಾಗಲಿದ್ದಾರೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷರು ಕಾಶಿನಾಥ ಗದಾಡಿ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!