Ad imageAd image

ಧಾರಾಕಾರವಾಗಿ ಸುರಿದ ಮಳೆರಾಯ ನೆಲಕ್ಕೆ ಉರುಳಿದ ವಿದ್ಯುತ್ ಕಂಬಗಳು & ಮರಗಳು.

Bharath Vaibhav
ಧಾರಾಕಾರವಾಗಿ ಸುರಿದ ಮಳೆರಾಯ ನೆಲಕ್ಕೆ ಉರುಳಿದ ವಿದ್ಯುತ್ ಕಂಬಗಳು & ಮರಗಳು.
WhatsApp Group Join Now
Telegram Group Join Now

ಯಳಂದೂರು: ಕೆಸ್ತೂರಿನಲ್ಲಿ ತಡರಾತ್ರಿ ಸುರಿದ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆರುಳಿದ ಘಟನೆ ನಡೆದಿದೆ.

ರಾತ್ರಿ 8 ಗಂಟೆಗೆ ಪ್ರಾರಂಭಗೊಂಡ ಮಳೆ 11 ಗಂಟೆಯವರೆಗೆ ಬಿರುಗಾಳಿ ಸಿಡಿಲು ಸಹಿತ ಮಳೆಯಾಗಿದೆ ಈ ಪರಿಣಾಮದಿಂದ ಮುಖ್ಯ ರಸ್ತೆಯಲ್ಲಿದ್ದ ನೀಲಗಿರಿ ಮರವೊಂದು ಟ್ರಾನ್ಸ್ ಫರ್ ಪೆಟ್ಟಿಯ ಮೇಲೇ ಬಿದ್ದಿದ್ದರಿಂದ 7 ವಿದ್ಯುತ್ ಕಂಬಗಳು ಸೇರಿ ಟ್ರಾನ್ಸ್‌ಫರ್ ಪೆಟ್ಟಿಯು ನೆಲಕ್ಕೆ ಉರುಳಿದೆ ಸದ್ಯಕ್ಕೆ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ.

ತಾಲ್ಲೂಕಿನ ಎಲ್ಲಡೇ ಉತ್ತಮ ಮಳೆಯಾಗಿ ಕೆಲವೊಂದು ಅನಾಹುತವನ್ನು ಸೃಷ್ಟಿ ಮಾಡಿದೆ.

ದ್ವಿ ದಳ ಧಾನ್ಯಗಳು ಮಳೆ ಇಲ್ಲದೇ ಸೊರಗಿತು, ರೈತರು ಆತಂಕದಲ್ಲಿದ್ದರು ಮಳೆ ಬಿದ್ದ ಪರಿಣಾಮ ರೈತರು ಸಂತಸದಲ್ಲಿದ್ದಾರೆ.

ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಆಗಮಿಸಿ ಮುಂದಿನ ಕಾರ್ಯದಲ್ಲಿ ಮಗ್ನರಾಗಿದ್ದಾರೆ

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!