ಬೆಳಗಾವಿ : ಬೇಸಿಗೆಯ ರಜೆಯ ಮೋಜಿನಲ್ಲಿದ್ದ ಹುಡುಗರ (Boys) ಪಾಲಿಗೆ ಹಿಡಕಲ್ ಜಲಾಶಯ ಮೃತ್ಯುಕೂಪವಾಗಿ ಪರಿಣಮಿಸಿದೆ.
ಹುಕ್ಕೇರಿ ತಾಲೂಕಿನ ಹಳೆಗುಡನಟ್ಟಿ ಸಮೀಪವಿರುವ ಹಿಡಕಲ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ದುರಂತವಾಗಿ ಮೃತಪಟ್ಟಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟವರನ್ನು ದಾದಾಬಾನಟ್ಟಿಯ ಆರ್.ಸಿ ಸೆಂಟರ್ ನಿವಾಸಿಗಳಾದ ಕೃಷ್ಣಾ ವಿಠಲ ಖಾನಾಪೂರೆ (14) ಮತ್ತು ಪ್ರಜ್ವಲ ಗೋಕಾರ (14) ಎಂದು ಗುರುತಿಸಲಾಗಿದೆ.
ಶಾಲೆಗಳಿಗೆ ರಜೆ ಘೋಷಣೆಯಾದ ಕಾರಣ ಗೆಳೆಯರೊಂದಿಗೆ ದೇವಸ್ಥಾನದ ಬಳಿಯ ನದಿಗೆ ಇಳಿದಿದ್ದ ಈ ಬಾಲಕರು, ನೀರಿನ ಆಳ ತಿಳಿಯದೇ ಅಪಾಯಕ್ಕೆ ಸಿಲುಕಿದ್ದಾರೆ.
ಈ ವೇಳೆ ಜೊತೆಯಲ್ಲಿದ್ದ ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಹರೆಯದ ಮಕ್ಕಳನ್ನು ಅಕಾಲಿಕವಾಗಿ ಕಳೆದುಕೊಂಡ ಪೋಷಕರ ರೋದನ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುವಂತಿತ್ತು. ಸದ್ಯ ಈ ಘಟನೆಯು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
ಈ ದುರಂತದಲ್ಲಿ ಮೃತಪಟ್ಟವರನ್ನು ದಾದಾಬಾನಟ್ಟಿಯ ಆರ್.ಸಿ ಸೆಂಟರ್ ನಿವಾಸಿಗಳಾದ ಕೃಷ್ಣಾ ವಿಠಲ ಖಾನಾಪೂರೆ (14) ಮತ್ತು ಪ್ರಜ್ವಲ ಗೋಕಾರ (14) ಎಂದು ಗುರುತಿಸಲಾಗಿದೆ.




