ಚೇಳೂರು: ತಾಲೂಕಿನಲ್ಲಿ ಶಾಸಕ ಸುಬ್ಬಾರೆಡ್ಡಿ ರವರ ನೇತೃತ್ವದಲ್ಲಿ 40 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಚೇಳೂರು ನಲ್ಲಿ ಇಂದು ಶಾಸಕರಾದ ಎಸ್,ಎನ್,ಸುಬ್ಬಾರೆಡ್ಡಿ ರವರು ಚೇಳೂರಿನ ಅಲ್ಪಸಂಖ್ಯಾತರ ಕಾಲೋನಿಯಲ್ಲಿ,ರಸ್ತೆಗಳು ತುಂಬಾ ಅದಗೆಟ್ಟಿರುವುದರಿಂದ. ರಸ್ತೆಗಳ ನಿರ್ಮಾಣಕೆಂದು 40ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದರು. ಅದೇ ರೀತಿ ಚರಂಡಿಗಳ ಸಮಸ್ಯೆ ಇರುವುದರಿಂದ ಚರಂಡಿ ಕಾಮಗಾರಿಯನ್ನು ಸಹಾ
ಮಾಡುವುದಾಗಿ ತಿಳಿಸಿದರು,ಇದೇ ಸಂದರ್ಭದಲ್ಲಿ ತಹಶಿಲ್ದಾರ್ ಶ್ರೀನಿವಾಸ್ ನಾಯುಡು.ಪಿ.ಡಿ ಓ ವೆಂಕಟಾಚಲಪತಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕೌಸ್ತಾರ್,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಪಿ. ಆರ್. ಚಲಂ .ಕೆ. ಜಿ.ವೆಂಕಟರಮಣ, ಜಾಲಾರಿ.ಸುರೇಂದ್ರ. ನಯಾಜ್, ಸಾಬು, ಕಡ್ಡಿಲ್ ವೆಂಕಟರಮಣ, ಮಂಜುನಾಥ್,ಶೇಖರ್ ರೆಡ್ಡಿ.ಗ್ರಾಮಸ್ಥರು
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ