Ad imageAd image

ಸಿದ್ದರಾಮಯ್ಯ ಸಿಎಂ ಆಗಿರುವರೆಗೂ ಮೀಸಲಾತಿ ಕೇಳುವುದಿಲ್ಲ : ಮೃತ್ಯುಂಜಯ ಸ್ವಾಮೀಜಿ

Bharath Vaibhav
ಸಿದ್ದರಾಮಯ್ಯ ಸಿಎಂ ಆಗಿರುವರೆಗೂ ಮೀಸಲಾತಿ ಕೇಳುವುದಿಲ್ಲ : ಮೃತ್ಯುಂಜಯ ಸ್ವಾಮೀಜಿ
Swamiji
WhatsApp Group Join Now
Telegram Group Join Now

ಅಥಣಿ : ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರೆಗೆ ಪಂಚಮಸಾಲಿ ಸಮುದಾಯ ಮೀಸಲಾತಿ ಕೇಳುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ವೇಳೆ ಲಾಠಿ ಚಾರ್ಜ್ ಮಾಡಿ ಸರಕಾರ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದೆ. ಈ ಕಾರಣಕ್ಕೆ ನಾವು ಸಿದ್ದರಾಮಯ್ಯ ಸರ್ಕಾರ ಮೀಸಲಾತಿ ಕೇಳುವುದಿಲ್ಲ ಎಂದರು.

ಬೆಳಗಾವಿ ಚಳಿಗಾಲ ಅಧಿವೇಶನ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿರುವ ಆದೇಶಕ್ಕೆ ಅವರು ಸಂತಸ ವ್ಯಕ್ತಪಡಿಸಿದರು .

 

WhatsApp Group Join Now
Telegram Group Join Now
Share This Article
error: Content is protected !!