Ad imageAd image

6 ವರ್ಷ ರಾಜ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ನನಗೆ ಖುಷಿ ತಂದಿದೆ – ವಿ.ಆನಂದ್

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: -ಪೀಣ್ಯ ದಾಸರಹಳ್ಳಿ ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರ ನಾವು ಹಿಂದೂಗಳು ಹಿಂದೂಗಳ ರಕ್ಷಣೆಗೆ ಹಿಂದೂ ಪರ ಸಂಘಟನೆಗಳು ಪ್ರಾಮಾಣಿಕ ಕೆಲಸ ಮಾಡುತ್ತಿವೆ ಅದರಲ್ಲಿ ನಾನು ರಾಜ್ಯಾಧ್ಯಕ್ಷನ್ನಾಗಿ ಹಿಂದೂಗಳ ದೇವಾಸ್ಥಾನಗಳ    ಜೀರ್ಣೋದ್ಧಾರ,ಆಂನೇಯ ಸ್ವಾಮಿ ಮಾರತಹಳ್ಳಿಯಲ್ಲಿ ಬೃಹತ್ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ, ಗಣೇಶ ಚತುರ್ಥಿ ಮತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ ರಾಜಗೋಪಾಲನಗರ ವಾರ್ಡಿನಲ್ಲಿ ಪ್ರತಿವರ್ಷ ಗಣೇಶ ಚತುರ್ಥಿ ನಿಮಿತ್ತ ಸಾರ್ವಜನಿಕವಾಗಿ ಗಣೇಶ್ ಚತುರ್ಥಿ, ಶಿವರಾತ್ರಿಯಲ್ಲಿ108 ಈಶ್ವರನ ವಿಗ್ರಹ ಸ್ಥಾಪಿಸಿ 9 ಅಥವಾ11ದಿನ ಸಾಂಸ್ಕೃತಿಕ, ಬೌದ್ಧಿಕ,ಭಜನೆ, ಕೀರ್ತನೆಗಳು ಮತ್ತು ಪ್ರತಿದಿನ ಬೆಳಿಗ್ಗೆ ಪ್ರಸಾದ ರಾತ್ರಿ ಭೋಜನ ವ್ಯವಸ್ಥೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಅದಲ್ಲದೆ ರಾಜ್ಯದಲ್ಲಿ 28 ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳ ಸಂಘಟನೆ ಮಾಡುತ್ತಿದೆ.

ಸಂಘಟನೆ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಚಿತ ಔಷಧಿ ವಿತರಣೆ, ಹಿಂದೂಗಳ ಪವಿತ್ರ ಹಬ್ಬ ನಿಮಿತ್ತ ವೃದ್ಧಾಶ್ರಮಕ್ಕೆ ತೆರಳಿ ತಿಂಡಿ ಭೋಜನ ವ್ಯವಸ್ಥೆ ಬಟ್ಟೆ ಬರಿ,ಹೊದಿಕೆ, ಚಳಿಗಾಲದಲ್ಲಿ ಕಂಬಳಿ ಅಥವಾ ರಗ್ ವಿತರಿಸುವುದು ನಮ್ಮ ಸಂಘಟನೆಯ ವಾಡಿಕೆಯಾಗಿದೆ.

ಅಯೋಧ್ಯೆಕ್ಕೆ ಪಾದಯಾತ್ರೆ , ಹಿಂದೂಗಳ ಮೇಲೆ ಅತ್ಯಾಚಾರ ದೌರ್ಜನ್ಯ ಮತ್ತು ಮತಾಂತರ ಹೀಗೆ ಅನೇಕ ರೂಪದಲ್ಲಿ ಹಿಂದೂಗಳಿಗೆ ಅನ್ಯಾಯ ಆದರೆ ತಕ್ಷಣ ಬೀದಿಗಿಳಿದು ಹೋರಾಟ ಮಾಡಿ ನ್ಯಾಯ ಕೊಡಿಸುವ ಕೆಲಸ ಚಾಚು ತಪ್ಪದೆ ಮಾಡಿದ ಕೀರ್ತಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಪ್ರವೀಣ್ ಭಾಯಿ ತೊಗಾಡಿಯಾ ಅವರಿಗೆ ಸಲ್ಲುತ್ತದೆ.

ಶ್ರೀರಾಮನ ಜಯಂತಿ, ಮಹಾವೀರ ಜಯಂತಿ ಹಲವಾರು ಹಿಂದು ಹಬ್ಬಗಳು ಆಚರಿಸಿ ಹಿಂದೂಗಳ ಸನಾತನ ಧರ್ಮ ಸಂಪ್ರದಾಯಗಳ ಆಚಾರ ವಿಚಾರಗಳ ಸಾಮೂಹಿಕ ಶಿಬಿರಗಳ ಮೂಲಕ ಹಿಂದೂ ಜನ ಜಾಗೃತಿ ಮೂಡಿಸುವ ಕಾರ್ಯ ಕ್ರಮಮಾಡುತ್ತೇವೆ ಇಂದು ಬೆಂಗಳೂರು ಹೊರವಲಯದ ಮಾತೃ ಶ್ರೀ ಮನೋವಿಕಾಸ ಕೇಂದ್ರ ಬುದ್ದಿಮಾಂದ್ಯ ಮಕ್ಕಳ ವಸತಿ ವಿಶೇಷ ಶಾಲೆ ಗೌಡಹಳ್ಳಿ ಭೇಟಿ ನೀಡಿ ಅಲ್ಲಿಯ ಬುದ್ದಿಮಾಂದ್ಯ ಮಕ್ಕಳಿಗೆ ಕೇಕ್ ಕತ್ತರಿ ಸಿಹಿ ತಿನ್ನಿಸಿ ಭೋಜನ ವಿತರಿಸಿ ಉಡುಗೊರೆ ನೀಡಿ ಆರು ವರ್ಷ ಸಮರ್ಥವಾಗಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ವಿ.ಆನಂದ್ ಭಾವುಕರಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಆರ್.ಸಿ.ಬಿ ಪ್ರದಾನ ಕಾರ್ಯದರ್ಶಿ ಆದಿ, ರವಿಕುಮಾರ್, ಗೋವಿಂದರಾಜು, ರವೀಂದ್ರ ಕುಮಾರ್,ಗುಂಡು, ಶ್ರೀಕಾಂತ್ ಭೀಮ ಸಂದೇಶ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹಮೂರ್ತಿ, ಸಂಜೆ ಸಮಯ ಪತ್ರಿಕೆಯ ಪ್ರತಿನಿಧಿ ಕೆಂಪರಾಜು, ಪತ್ರಕರ್ತ ಗೋಪಿ, ಸೇರಿದಂತೆ ಮುಂತಾದವರು ಇದ್ದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!