ಯಳಂದೂರು:– ಪಟ್ಟಣದಲ್ಲಿ ವಾಲ್ಮೀಕಿ ಪುತ್ತಳಿ ಹಾಗೂ ಗ್ರಂಥಾಲಯವನ್ನು ನಿರ್ಮಿಸುವಂತೆ ನಾಯಕ ಸಮುದಾಯದ ಯಜಮಾನರು ಹಾಗೂ ಮುಖಂಡರು ಆಗ್ರಹಿಸಿದರು.
ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಇರುವ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ತಾಲೂಕು ನಾಯಕ ಮಂಡಳಿ ಹಾಗೂ ಮುಖಂಡರು ಸರಳವಾಗಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಿದರು.
ಈ ವೇಳೆ ಸಮುದಾಯದ ಯಜಮಾನರಾದ ಮೂರ್ತಿ ಮಾತನಾಡಿ ಯಳಂದೂರು ತಾಲೂಕಿನ ನಾಯಕ ಸಂಘದ ವತಿಯಿಂದ ನಾವು ಸರ್ಕಾರದ ಆದೇಶವನ್ನು ಹೊರತುಪಡಿಸಿ ಸಮಾಜದ ಮುಖಂಡರು ಹಾಗೂ ತಾಲೂಕ ನಾಯಕ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ಸರಳವಾಗಿ
ಆಚರಣೆ ಮಾಡಿಕೊಂಡಿದ್ದೇವೆ,
ಚಾಮರಾಜನಗರದಲ್ಲಿ ನಡೆಯುತ್ತಿರುವ ನಾಯಕ ಸಮುದಾಯದ ದೊಡ್ಡ ಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ನಾವೆಲ್ಲರೂ ಆಗಮಿಸುತ್ತಿದ್ದೇವೆ, ಜಿಲ್ಲೆಯಾದ್ಯಂತ ಸರ್ಕಾರದ ವತಿಯಿಂದ ವಾಲ್ಮೀಕಿ ಪುತ್ತಳೆ ನಿರ್ಮಾಣಕ್ಕೆ ಕೆಡುಕುಂಟು ಮಾಡಿರುವುದರಿಂದ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಇಂದು ಚಾಮರಾಜನಗರದಲ್ಲಿ ನಡೆಯುವ ದೊಡ್ಡ ಮಟ್ಟದ ವಾಲ್ಮೀಕಿ ಜಯಂತಿಗೆ ಹೋಗುತ್ತಿದ್ದು ಆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು,
ಈ ಸಂದರ್ಭದಲ್ಲಿ ತಾಲೂಕು ನಾಯಕ ಸಂಘದ ಅಧ್ಯಕ್ಷ ಮುರಳಿ ಕೃಷ್ಣ, ಮಣಿಗಾರ್ ರಂಗನಾಥ, ವಾಲ್ಮೀಕಿ ನಾಯಕ ಸಂಘದ ಗೌರವಾಧ್ಯಕ್ಷ ಸೂರ್ಯನಾರಾಯಣ್,ಕಿಟ್ಟಿ, ಬಂಕ್ ಅನಿಲ್, ತಾಲೂಕು ಖಜಾಂಚಿ ಉಮೇಶ್, ಯಜಮಾನರಾದ ದೇವರಾಜು,ಬಂಗಾರು, ಹೋಟೆಲ್ ನಾಗಣ್ಣ, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ರಘು ನಾಯಕ್, ಆನಂದ್, ಪಟ್ಟಣ ಪಂಚಾಯತಿ ಸದಸ್ಯರಾದ ಮಹೇಶ್, ಮಹದೇವ ನಾಯಕ ಹಾಗೂ ನಾಯಕ ಸಮುದಾಯದ ಮುಖಂಡರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ