Ad imageAd image

ಶ್ರೀ ಬಿರೇಶ್ವರ ಬ್ಯಾಂಕಿನ ನೂತನ ಕಟ್ಟಡದ ವಾಸ್ತುಶಾಂತಿ ಪೂಜಾ ಕಾರ್ಯಕ್ರಮ

Bharath Vaibhav
ಶ್ರೀ ಬಿರೇಶ್ವರ ಬ್ಯಾಂಕಿನ ನೂತನ ಕಟ್ಟಡದ ವಾಸ್ತುಶಾಂತಿ ಪೂಜಾ ಕಾರ್ಯಕ್ರಮ
WhatsApp Group Join Now
Telegram Group Join Now

ಐನಾಪುರ :  ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಬ ಜೋಲ್ಲೆಯವರ ನೇತೃತ್ವದ ಶ್ರೀ ಬಿರೇಶ್ವರ ಕೊ ಆಪ್ ಕ್ರೆಡಿಟ್ ಸೋಸಾಯಟಿಯು ಕಳೆದ 36ವರ್ಷಗಳಿಂದ ನಿರಂತರವಾಗಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ದಾಪುಗಾಲು ಹಾಕುತ್ತಾ ಸಂಸ್ಥೆ ಲಾಭದಿಂದ. ಮುನ್ನುಗುತ್ತಿದ್ದು ಇದ್ದಕೆಲ್ಲ ಜೋಲ್ಲೆಯವರ ಮೇಲಿರುವ ಗ್ರಾಹಕರ ಪ್ರೀತಿ, ವಿಶ್ವಾಸ,ಸಹಕಾರವೇ ಮುಖ್ಯ ಕಾರಣ ಎಂದು ಬಿರೇಶ್ವರ ಸಂಸ್ಥೆಯ ಜನರಲ್ ಮ್ಯಾನೇಜರ್ ಬಹದ್ದೂರ ಗುರವ ಹೇಳಿದರು.
ಅವರು ದಿ 12ರಂದು ಗುರುವಾರ ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿರುವ ಬಿರೇಶ್ವರ ಬ್ಯಾಂಕಿನ ನೂತನ ಕಟ್ಟಡದ ವಾಸ್ತುಶಾಂತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಬಿರೇಶ್ವರ ಸಂಸ್ಥೆಯು ಕರ್ನಾಟಕ ,ಮಹಾರಾಷ್ಟ್ರ,ಗೊವಾ ರಾಜ್ಯಗಳಲ್ಲಿ 231ಶಾಖೆಗಳನ್ನು ಹೊಂದಿ 5100ಕೋಟಿ ಡಿಪಾಜಿಟ್ ಹೊಂದಿದ್ದು 4ಲಕ್ಷಕೂ ಅಧಿಕ ಸದಸ್ಯರನ್ನು ಹೊಂದಿದ್ದು,3900ಕೋಟಿ ಸಾಲ ನೀಡಿದ್ದೇವೆ.

ಕಳೆದವರ್ಷ45ಕೋಟಿ30ಲಕ್ಷ ಲಾಭ ಗಳಿಸಿದೆವೆ ಇದ್ದಲ್ಲದೆ ಇನ್ನೂ ಅನೇಕ ಸಂಘ ಸಂಸ್ಥೆಗಳ ಮೂಲಕ ಜೊಲ್ಲೆಯವರು ಸಹಸ್ರಾರು ಕುಟುಂಬಗಳಿಗೆ ಗ್ರಾಮೀಣ ಭಾಗಗಳಲ್ಲಿ ಯುವಕರಿಗೆ ಉದ್ಯೋಗ ನೀಡಿ ಆಶ್ರಯದಾತರಾಗಿದಾರೆ ಹಾಗೂ ಲಕ್ಷಾಂತರ ಜನರಿಗೆ ಸಾಲ ನೀಡಿ ಆರ್ಥಿಕ ಅಭಿವೃದ್ಧಿ ಮಾಡುತ್ತಾ ಬಂದಿದ್ದಾರೆ ಎಂದರು.

ನಿರ್ದಶಕ ತಮ್ಮಣ್ಣಾ ಪಾರಶೇಟ್ಟಿಮಾತನಾಡಿ, ಇದೇ 11ರಿಂದ 16ರವರಗೆ ನಿಪಾಣಿ ತಾಲ್ಲೂಕಿನ ಹಾಲ ಸಿದ್ದನಾಥ ಶುಗರ್ಸ ಕಾರ್ಖಾನೆ ಆವರಣದಲ್ಲಿ ಜೊಲ್ಲೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಐತಿಹಾಸಿಕ ಕೃಷಿ ಉತ್ಸವದಿಂದ ಲಕ್ಷಾಂತರ ಗ್ರಾಮೀಣ ಭಾಗದ ರೈತ ಭಾಂಧವರಿಗೆ ವರದಾನವಾಗಲಿದೆ ಎಂದರು.

ಇ ಸಂದರ್ಭದಲ್ಲಿ ಸಂಸ್ಥೆ ಚೇರಮನ ಅಪ್ಪಾಸಾಬ ಜೋಲೆ,ಎಜಿಎಂ ಪ್ರವೀಣ ತೋರಿ,ಸ್ಥಳೀಯ ಶಾಖಾ ಅಧ್ಯಕ್ಷ ಶಂಭುಲಿಂಗ ಕುಡಚಿ,ತಮ್ಮಣ್ಣಾ ಪಾರಶೇಟ್ಟಿ,ರಾಮು ಕಾಗಲಿ,ರಾಜು ಅಪರಾಜ,ನಿಂಗಪ್ಪ ಖೊಕಲೆ, ಜಿನ್ನಪ್ಪಾಶಿರಹಟ್ಟಿ,ಭೀಮು ಬಸ್ತವಾಡ, ರವಿಂದ್ರ ಬಣಜವಾಡ,ನೀತಿನ ತೋಡಕರ,ಮಂಜುನಾಥ ಕಾಗಲಿ,ಅಣಾಸಾಬ ಡೂಗನವರ,ದಾದಾ ಪಾಟೀಲ, ಎಸ್.ಕೆ ಮಾನೆ ವಿಕ್ರಂ ಗುರವ ಸಂದೀಪ ಜಾಧವ, ಉದಯ ನಿಡಗುಂದಿ,ಸೇರಿದಂತೆ ಇತರರು ಇದ್ದರು.

ವರದಿ: ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!