ಹಾವೇರಿ : ಶಿಗ್ಗಾಂವಿಯ ತಶೀಲ್ದಾರ್ ಕಛೇರಿಯ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಮತ್ತು ಇಂಗ್ಲೀಷ ಭಾಷಗಳನ್ನಾ ಕಡ್ಡಾಯಗೊಳಿಸುವ ದ್ವಿಭಾಷಾ ನೀತಿಯನ್ನ ಜಾರಿಗೆ ತರಬೇಕು ಹಾಗೆ ತೃತೀಯ ಭಾಷೆ ಹಿಂದಿಯನ್ನ ಪಟ್ಯಕ್ರಮದಿಂದ ಹೊರಗಿಡಬೇಕು ಎಂದು ಪ್ರತಿಭಟನೆ ನಡೆಸಲಾಯಿತು.
ಸಿ ಬಿ ಎಸ್ ಸಿ ಮತ್ತು ಐ ಸಿ ಎಸ ಇ ಶಾಲೆಗಳಲ್ಲಿ ಕನ್ನಡ ಭಾಷೆಯನ್ನ ಕಡ್ಡಾಯಗೊಳಿಸಿ ಕನ್ನಡ ಮಾದ್ಯಮ ಶಾಲೆಗಳನ್ನ ಬಲ ಪಡಿಸಬೇಕು ಹಾಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಕರ್ನಾಟಕ ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಓಲೆಕಾರ ಶಿಗ್ಗಾವಿ ತಾಲೂಕ ಅಧ್ಯಕ್ಷ ಶೇಖಪ್ಪ ದೀಪಾವಳಿ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ ಜಿಲ್ಲಾ ಉಪಾಧ್ಯಕ್ಷ ಫಕೀರೇಶ ಕಟ್ಟಿಮನಿ ತಾಲೂಕ ಉಪಾಧ್ಯಕ್ಷ ಶಿವು ಕಮ್ಮಾರ ಮುಖಂಡರುಗಳಾದ ಮಮತಾ ಕಟ್ಟೆಪ್ಪನವರ ಪ್ರೇಮ ನಾರಾಯಣಸ್ವಾಮಿ ಸುಧಾ ಪಾಟೀಲ ಗೌರಮ್ಮ ಬೆಲ್ಲದ ಹಾಲಮ್ಮಹಿರೇಗೌಡ್ರು ಲತಾ ಕಳ್ಳಿಹಾಳ ಸರಸ್ವತಿ ಪಾರ್ವತಿ ಕುಂಬಾರಿ ಹೊಸರುತ್ತಿ ನೀಲಾಂಬಿಕ ನಿಡಗುಂದಿ ರೇಣುಕಾ ಮಾಲೆಗಾರ ಸೌಭಾಗ್ಯ ಬರಮಗೌಡ್ರು ಶಾರದಾ ಮೇಗಳಮನಿ ಶ್ರೀನಿವಾಸ್ ಚಕ್ರಸಾಲಿ ಪ್ರಮೋದ್ ಹಡಪದ ಜಯರಾಜ ಹಾದಿಮನಿ ಆಕಾಶ ವನಹಳ್ಳಿ ಗಗನಧಿಪ ಹಡಪದ ಸೇರಿದಂತೆ ಅನೇಕರು ಹಾಜರಿದ್ದರು.
ವರದಿ : ರಮೇಶ್ ತಾಳಿಕೋಟಿ