Ad imageAd image
- Advertisement -  - Advertisement -  - Advertisement - 

ಕರವೇ ತಾಲೂಕಾಧ್ಯಕ್ಷರಾಗಿ ವಿರೇಶ ರೆಡ್ಡಿ ಬೋತಗಿಕರ್ ನೇಮಕ

Bharath Vaibhav
ಕರವೇ ತಾಲೂಕಾಧ್ಯಕ್ಷರಾಗಿ ವಿರೇಶ ರೆಡ್ಡಿ ಬೋತಗಿಕರ್ ನೇಮಕ
WhatsApp Group Join Now
Telegram Group Join Now

ಹುಮನಾಬಾದ:- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಪರ ಹೋರಾಟಗಾರರ ನೇತೃತ್ವದಲ್ಲಿ ಟಿಎ ನಾರಾಯಣ ಗೌಡರ ಆದೇಶದ ಮೇರೆಗೆ ವಿರೇಶ್ ರೆಡ್ಡಿ ಬೋತಗಿಕರ್ ಅವರನ್ನು ಹುಮನಾಬಾದ ತಾಲೂಕು ಕರವೇ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ್ ಆದೇಶ ಪತ್ರ ನೀಡಿ ನೇಮಕ ಮಾಡಿದರು.

ಕನ್ನಡ ನಾಡು ನುಡಿ ನೆಲ ಜಲ ಹಾಗೂ ಕನ್ನಡಿಗ ಯುವಕರಿಗೆ ಉದ್ಯೋಗ ಕೊಡಿಸಲು ಹೋರಾಡಬೇಕು ಎಂದು ಸಲಹೆ ನೀಡಿದರು.
ಬಳಿಕ ನೂತನ ಅಧ್ಯಕ್ಷ ವಿರೇಶ್ ರೆಡ್ಡಿ ಮಾತನಾಡಿ, ಅಧ್ಯಕ್ಷರಾಗಿ ಆಯ್ಕೆ ಮಾಡಿದಕ್ಕಾಗಿ ಧನ್ಯವಾದಗಳು ಸಲ್ಲಿಸುತ್ತೇನೆ.ಅಧ್ಯಕ್ಷ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸುತೆನೆ.ಕನ್ನಡ ನಾಮಫಲಕ ಅಳವಡಿಕೆ ಮಾಡಲು ಒತ್ತಾಯಿಸಿ, ಕೈಗಾರಿಕೆ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಕೆಲಸ ಕೊಡಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ನಾಗಯ್ಯ ಸ್ವಾಮಿ,ಪವನ ಗೊಂಡ,ಶಂಕರ ಹಾಲ,ಆಕಾಶ ಪವಿತ್ರ,ಉಮೇಶ್ ದಾಡ್ಗಿ, ಪ್ರಮೋದ್ ಚಿದ್ರಿ, ಅರುಣ್ ಕಲ್ಲೂರ್, ಮಲ್ಲು ಮೊಳಕೆರಾ, ಮನೋಜ್ ಸೀತಾಳೆ, ನಿತಿನ್ ಬಿರಾದರ್, ರಾಜಶೇಖರ್ ರೆಡ್ಡಿ ಉಪಸ್ಥಿತರಿದ್ದರು.

ವರದಿ:-  ಸಜೀಶ್

WhatsApp Group Join Now
Telegram Group Join Now
Share This Article
error: Content is protected !!