Ad imageAd image
- Advertisement -  - Advertisement -  - Advertisement - 

ಮೇವು ತರಲು ಹೋದಾಗ ಕೃಷ್ಣಾ ನದಿಪಾಲಾದ ರೈತ

Bharath Vaibhav
ಮೇವು ತರಲು ಹೋದಾಗ ಕೃಷ್ಣಾ ನದಿಪಾಲಾದ ರೈತ
WhatsApp Group Join Now
Telegram Group Join Now

ಬಾಗಲಕೋಟೆ : ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಳ್ಳ ಕೊಳ್ಳ, ನದಿಗಳು ಸೇರಿದಂತೆ ಎಲ್ಲಾ ಡ್ಯಾಮ್ ಗಳು ಕೂಡ ಸಂಪೂರ್ಣವಾಗಿ ಭರ್ತಿಯಾಗಿವೆ.

ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ರೈತನೊಬ್ಬ ಮೇವು ತರಲು ಹೋದಾಗ ಕೃಷ್ಣಾ ನದಿಯ ಹಿನ್ನೀರಿನಲ್ಲಿ ನೀರು ಪಾಲಾಗಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಬಳಿ ಈ ಘಟನೆ ನಡೆದಿದೆ. ಅಲಗೂರು ಗ್ರಾಮದ ನಿವಾಸಿಯಾಗಿರುವ ವೃದ್ಧ ಸಿದ್ದಪ್ಪ ಆಡೋಳಿ ನಾಪತ್ತೆಯಾಗಿದ್ದಾರೆ. ಕೃಷ್ಣಾ ನದಿಯ ಹಿನ್ನೀರು ಪ್ರದೇಶದ ಬಳಿ ರೈತನ ಸೈಕಲ್ ಮಾತ್ರ ಪತ್ತೆಯಾಗಿದ್ದು. ನದಿಯಲ್ಲಿ ರೈತ ಸಿದ್ದಪ್ಪ ಅಡೊಳ್ಳಿ ಕೊಚ್ಚಿ ಹೋಗಿರುವ ಶಂಕೆ ಇದೀಗ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಶವ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದರಿಂದ ಪ್ರವಾಹದ ಭೀತಿ ಇದೆ. ಹಾಗಾಗಿ ನದಿ ತಟದಲ್ಲಿ ಯಾರು ಹೋಗಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದರೂ ಸಹ ಇದೀಗ ಈ ಒಂದು ದುರಂತ ಸಂಭವಿಸಿದೆ.

 

 

WhatsApp Group Join Now
Telegram Group Join Now
Share This Article
error: Content is protected !!