ಚೇಳೂರು : ನೂತನ ತಾಲ್ಲೂಕು ಚೇಳೂರು ಪಟ್ಟಣದ ಬಾಗೇಪಲ್ಲಿ ರಸ್ತೆಯಲ್ಲಿರುವ ಸ್ವಯಂ ಕೃಷಿ ಕಟ್ಟಡ ನಿರ್ಮಾಣ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಕಚೇರಿಯಲ್ಲಿ ಆಯುಧ ಪೂಜೆ ಏರ್ಪಡಿಸಿದ್ದು ಪೂಜೆ ಕೈಂಕರ್ಯ ವನ್ನು ರಾಘವೇಂದ್ರ ಸ್ವಾಮೀಜಿಗಳು ನೆರವೇರಿಸಿದರು.
ಪೂಜೆ ನಂತರ ಕಾರ್ಮಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಜಬಿವುಲ್ಲಾ, ಅಧ್ಯಕ್ಷ ಪಿ ಬಾಬಾಜಾನ್
ಉಪಾಧ್ಯಕ್ಷ ಹರೀಶ, ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಪಾಷಾ, ಪದಾಧಿಕಾರಿಗಳಾದ ಮಹಮ್ಮದ್ ಶಬ್ಬೀರ್, ಸಿಎಚ್ ಬಾವಾಜಾನ್, ಇ ಆರ್ ಕೃಷ್ಣಮೂರ್ತಿ, ಎಂ ವೇಣುಗೋಪಾಲ್, ಹಾಗೂ ಇತರೆ ಸಂಘದ ಮುಖಂಡರುಗಳಾದ ಟೈಲರ್ ಸುಧಾಕರ,
ಕಾರ್ಪೆಂಟರ್ ಫಕೃದ್ದೀನ್, ಇತರೆ ಮುಖಂಡರು ಹಾಜರಿದ್ದರು.
ವರದಿ :ಯಾರಬ್. ಎಂ




