ರಾಯಚೂರು : ನಗರ ಮತ್ತು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರತಿಯೊಂದು ಬೂತಗಳಿಗೆ ಹೋಗಿ ಸದಸ್ಯತ್ವವನ್ನು ನೋಂದಣಿ ಮಾಡಿಸಬೇಕು ಪ್ರತಿಯೊಂದು ಬೂತಗೆ ಸುಮಾರು 200 ರಿಂದ 500 ಜನರವರೆಗೆ ಸದಸ್ಯರನ್ನು ನೇಮಕ ಮಾಡಬೇಕು.
ಮತ್ತು ಈಗಾಗಲೇ ಕಾರ್ಪೊರೇಟರ್ ಚುನಾವಣೆ ಬರುತ್ತಿದ್ದು ಪ್ರತಿ ವಾರ್ಡಗಳಲ್ಲಿ ಸದಸ್ಯರನ್ನು ನೇಮಕ ಮಾಡಿ ತಮ್ಮ ತಮ್ಮ ವಾರ್ಡಗಳನ್ನು ಭದ್ರಗೊಳಿಸಿಕೊಳ್ಳಬೇಕು ಅಂದಾಗ ಮಾತ್ರ ನಾವು ಚುನಾವಣೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಈಗಾಗಲೇ ಚುನಾವಣೆಗೆ ಸ್ಪರ್ಧಿಸುವಂತೆ ಆಕಾಂಕ್ಷಿಗಳು ತಮ್ಮ ತಮ್ಮ ಹಳ್ಳಿಗಳಲ್ಲಿ ಭೂತ್ ಮಟ್ಟಗಳಲ್ಲಿ ಸದಸ್ಯರನ್ನು ನೇಮಕ ಮಾಡಿ ಮತ್ತು ಬೂತ್ ಮಟ್ಟದ ಕಾರ್ಯಕ್ರಮವನ್ನು ನೇಮಕ ಮಾಡಿಕೊಂಡು ನಾವು ಈಗಾಗಲೇ ನಾವು ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಒಂದು ನಿಲವು ಇದೆ ನಾವು ಯಾವ ಪಕ್ಷದವರಿಗೆ ಅಂಜುವ ಅವಶ್ಯಕತೆ ಇಲ್ಲ ಈಗಾಗಲೇ ನಾವು ರಾಯಚೂರು ಜಿಲ್ಲೆಯಲ್ಲಿ ಸಿಂಧನೂರಿನಲ್ಲಿ ಜನತಾ ಪಕ್ಷ ವೆಂಕಟರಾವ್ ನಾಡಗೌಡ ದೇವದುರ್ಗದಲ್ಲಿ
ಜಿ.ಕರಿಯಮ್ಮ ನಾಯಕ್. ಮಾನ್ವಿಯಲ್ಲಿ ರಾಜ ವೆಂಕಟಪ್ಪ ನಾಯಕ್.ರಾಯಚೂರು ನಗರದಲ್ಲಿ ಡಾಕ್ಟರ್ ಶಿವರಾಜ್ ಪಾಟೀಲ್. ನಾವು ಗೆದ್ದಂತ ಕ್ಷೇತ್ರಗಳು ಭದ್ರವಾಗಿವೆ ನಾವು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಂಬರುವ ಚುನಾವಣೆಗೆ ಸದಸ್ಯತ್ವ ಅಭಿಯಾನ ಮಾಡಿ ಚುನಾವಣೆ ಎದುರಿಸಲು ಎಂ ವಿರೂಪಾಕ್ಷಿ ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ ಮಾಂತೇಶ ಪಾಟೀಲ್ ಸಣ್ಣ ನರಸಿಂಹ ನಾಯಕ್. ನಾಗರಾಜ ಗೌಡ. ಶಿವಶಂಕರ್ ವಕೀಲರು ಯಲ್ಲರೆಡ್ಡಿ. ಹಂಪಯ್ಯ ನಾಯಕ್. ಮತ್ತು ಜೆಡಿಎಸ್ ಮುಖಂಡರು ಗ್ರಾಮ ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ: ಗಾರಲದಿನ್ನಿ ವೀರನಗೌಡ




