Ad imageAd image

17 ಸಾವಿರ ರೂಪಾಯಿಗೆ ಹರಾಜಾದ ಒಂದೇ ಒಂದು ನಿಂಬೆಹಣ್ಣು

Bharath Vaibhav
17 ಸಾವಿರ ರೂಪಾಯಿಗೆ ಹರಾಜಾದ ಒಂದೇ ಒಂದು ನಿಂಬೆಹಣ್ಣು
WhatsApp Group Join Now
Telegram Group Join Now

ತಮಿಳುನಾಡು: ಇಲ್ಲಿನ ಈರೋಡ್ ಜಿಲ್ಲೆಯ ಪಳಂತಿನ್ನಿ ಕರುಪ್ಪ ಈಶ್ವರನ್ ದೇವಾಲಯದಲ್ಲಿ (Eswaran Temple) ಮಹಾ ಶಿವರಾತ್ರಿ (Maha Shivaratri) ಅಂಗವಾಗಿ ನಡೆದ ವಿಶೇಷ ಹರಾಜು (Auction) ಗಮನ ಸೆಳೆದಿದೆ.

ವಿಳಕ್ಕೇತಿ ಸಮೀಪದ ಪುದು ಅಣ್ಣಾಮಲೈ ಪಾಳಯಂನಲ್ಲಿರುವ ಈ ದೇವಸ್ಥಾನದಲ್ಲಿ ಪ್ರಧಾನ ದೇವರಿಗೆ ಅಲಂಕರಿಸಿದ್ದ ಬೆಳ್ಳಿ ಉಂಗುರ, ಬೆಳ್ಳಿ ನಾಣ್ಯ ಹಾಗೂ ನಿಂಬೆಹಣ್ಣನ್ನು (Lemon) ಹರಾಜಿಗೆ ಇಡಲಾಯಿತು.

ಈ ವೇಳೆ ವಡುಗಪಟ್ಟಿ ಗ್ರಾಮದ ವಿಶ್ವನಾಥನ್ ಅವರು ನಿಂಬೆಹಣ್ಣಿಗೆ ದಾಖಲೆ ಮಟ್ಟದ ₹13,000 ಮೊತ್ತವನ್ನು ನೀಡಿ ಪಡೆದುಕೊಂಡರು. ಪರಮಶಿವಂ ಎಂಬ ಸ್ಥಳೀಯರು ಬೆಳ್ಳಿ ಉಂಗುರವನ್ನು ₹33,000ಕ್ಕೆ ಖರೀದಿಸಿದರೆ, ಅತ್ತಪ್ಪಂಪಾಳಯಂ ಗ್ರಾಮದ ದುರೈ ಅವರು ₹43,000 ನೀಡಿ ಬೆಳ್ಳಿ ನಾಣ್ಯವನ್ನು ತಮ್ಮದಾಗಿಸಿಕೊಂಡರು.

ಹೀಗೆ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ದೇವಾಲಯದ ಅಭಿವೃದ್ಧಿ ಕಾರ್ಯಗಳು ಹಾಗೂ ವಿಶೇಷ ಪೂಜೆಗಳಿಗಾಗಿ ಬಳಸಲಾಗುವುದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

 

🚨 ವೈರಲ್ ಸುದ್ದಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!