Ad imageAd image

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ ಆಚರಣೆ

Bharath Vaibhav
WhatsApp Group Join Now
Telegram Group Join Now

ಇಲಕಲ್:-  ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯಿಂದ ಇಲ್ಕಲ್ ನಗರದ ಬಸ್ ನಿಲ್ದಾಣದ ಅವರಣದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್  ಅವರ 133 ನೇ ಜಯಂತೋತ್ಸವ ಆಚರಣೆ

ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯಿಂದ ಇಲ್ಕಲ್ ನಗರದ ಬಸ್ ನಿಲ್ದಾಣದ ಅವರಣದಲ್ಲಿ ಸಾರ್ವಜನಿಕವಾಗಿ ಭಾರತ ರತ್ನ ಸಂವಿಧಾನ ಶಿಲ್ಪಿ ಸಾಮಾಜಿಕ ನ್ಯಾಯದ ಹರಿಕಾರರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಒಂದು 133 ನೇ ಜಯಂತೋತ್ಸವ ಹಾಗೂ ಅಕ್ಷರದ ಅಮ್ಮ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಉಪಾಧ್ಯಕ್ಷರಾದ ಶ್ರೀ ಲಾಲ್ ಭಾಷಾ ಶಿವನಗುತ್ತಿ ಖಜಾಂಚಿಯಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶೇಖರಯ್ಯ ಹಿರೇಮಠ ಸಂಸ್ಥೆಯ ಸಂಚಾಲಕರಾದ ಎಸ್ ಎಸ್ ಪಾಟೀಲ್ ಪದಾಧಿಕಾರಿಗಳಾದ ಡಾಕ್ಟರ್ ವಿಜಯಕುಮಾರ್ ಮಿರಾಕೂರ್ ಬೀದಿ ಬೀದಿ ವ್ಯಾಪಾರ ಒಕ್ಕೂಟದ ಇಳಕಲ್ ತಾಲೂಕಿನ ಅಧ್ಯಕ್ಷರಾದ ಶ್ರೀ ಪವಾಡಪ್ಪ ಚಲವಾದಿ ಬಸವರಾಜ್ ಕುಂಬಾರ್ ಇಲಕಲ ಘಟಕದ ಸಾರಿಗೆ ಸಿಬ್ಬಂದಿ ವರ್ಗ ಸಾರ್ವಜನಿಕರ ಸಹ ಯೋಗದೊಂದಿಗೆ ಆಚರಿಸಲಾಯಿತು

ಅಧ್ಯಕ್ಷರಾದ ಶ್ರೀ ರಾಜು ಬೋರಾ ಅವರು ಮಾತನಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ವಿಚಾರಧಾರೆ ಸಮಾಜಕ್ಕೆ ಆದರ್ಶಪ್ರಾಯವಾಗಿವೆ ಅವರು ರಚಿಸಿರುವ ಸಂವಿಧಾನ ಎಲ್ಲ ವರ್ಗದವರಿಗೂ ಅನುಕೂಲವಾಗಿವೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಬದುಕು ಸಾಗಿಸುವ ಗುರಿಯನ್ನು ಹೊಂದಬೇಕು ಎಂದರು

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!