Ad imageAd image

ಉತ್ತನೂರಿನಲ್ಲಿ ಶ್ರೀ ಉತ್ತರೇಶ್ವರ ಸ್ವಾಮಿಯ ಅದ್ದೂರಿ ರಥೋತ್ಸವ

Bharath Vaibhav
ಉತ್ತನೂರಿನಲ್ಲಿ ಶ್ರೀ ಉತ್ತರೇಶ್ವರ ಸ್ವಾಮಿಯ ಅದ್ದೂರಿ ರಥೋತ್ಸವ
WhatsApp Group Join Now
Telegram Group Join Now

ಸಿರುಗುಪ್ಪ : -ತಾಲೂಕಿನ ಉತ್ತನೂರು ಗ್ರಾಮದ ಅಧಿದೈವ ಶ್ರೀ ಉತ್ತರೇಶ್ವರ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಫಲಪುಷ್ಪಗಳು ಆಭರಣಗಳಿಂದ ಅಲಂಕಾರ, ಹೋಮ ಹವನ, ಮಹಾಮಂಗಳಾರತಿ, ಪಲ್ಲಕ್ಕಿಸೇವೆಯಂತಹ ಧಾರ್ಮಿಕ ಕಾರ್ಯಗಳು ಜರುಗಿದವು.ಈ ರಥೋತ್ಸವವು ಪೂರ್ವಾಭಿಮುಖವಾಗಿ ಜರುಗಿತು.

ಪ್ರತಿವರ್ಷ ಈ ಗ್ರಾಮದಲ್ಲಿ ಪ್ರತಿವರ್ಷ ಹಂಪಿ ಹುಣ್ಣಿಮೆಯಂದು ಶ್ರೀ ಉತ್ತರೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತದೆ. ಶ್ರೀ ಉತ್ತರೇಶ್ವರ ಸ್ವಾಮಿ ರಥೋತ್ಸವ ಜರುಗುವುದರಿಂದ ಇಡೀ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜಾತ್ರೆಯ ಸಂಭ್ರಮ ಸಡಗರ ಕಾಣಬಹುದಾಗಿದೆ.

ಹರಕೆ ಹೊತ್ತ ಭಕ್ತರು ಕಾಯಿ ಕರ್ಪೂರ ಎಡೆ ನೈವೇದ್ಯ ಸಮರ್ಪಣೆ ಮಾಡಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿವಿಧ ವಾದ್ಯಗಳೊಂದಿಗೆ ಜರುಗಿದ ರಥೋತ್ಸವವಕ್ಕೆ ನೆರೆಯ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.

ರಥೋತ್ಸವ ಅಂಗವಾಗಿ ರಾತ್ರಿ ರೇಣುಕಾ ಎಲ್ಲಮ್ಮನ ಕಥೆ ಅರ್ಥಾತ್ ಕಾರ್ತಿಯ ವೀರನ ವಧೆ ಎಂಬ ಬಯಲಾಟ ನಡೆಯಿತು.

ವರದಿ ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!