Ad imageAd image

ಕ್ಷೇತ್ರದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದೆ:ಶಾಸಕ ಸಿದ್ದು ಪಾಟೀಲ್

Bharath Vaibhav
WhatsApp Group Join Now
Telegram Group Join Now

ಹುಮನಾಬಾದ:- ಕ್ಷೇತ್ರದಲ್ಲಿ ಕಳೆದ ವಿಧಾನ ಸಭೆ ಚುನಾವಣೆಕ್ಕಿಂತ ಈ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಹೆಚ್ಚಿನ ಅಲೆ ಶುರುವಾಗಿದೆ ಎಂದು ಶಾಸಕ ಸಿದ್ದು ಪಾಟೀಲ ಹೇಳಿದ್ದಾರೆ.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು,ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮತ್ತೆ ಸುಳ್ಳು ಭರವಸೆ ಹೇಳಿ ಪ್ರಚಾರಕ್ಕೆ ಇಳಿದಿದೆ,ರಾಜ್ಯದಲ್ಲಿ ಅಭಿವೃದ್ಧ ಕುಸಿದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬೀದರ್ ಲೋಕಸಭೆ ಕ್ಷೇತ್ರ ನೋಡಿದರೆ ಹಿಂದಿನ ಚುನಾವಣೆಯಲ್ಲಿ 8 ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಇತ್ತು ಅದರಂತೆ ಈ ಬಾರಿಯು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ಭರವಸೆ ಇದೆ,ಜೊತೆಗೆ ಹುಮನಾಬಾದ ಕ್ಷೇತ್ರದಿಂದ ಹೆಚ್ಚಿನ ಮತದಾನ ಮಾಡುವ ಮೂಲಕ 25 ಸಾವಿರ ಲೀಡ್ ಬಿಜೆಪಿ ಅಭ್ಯರ್ಥಿ ಸಿಗಲಿದೆ ಎಂದು ಹೇಳಿದರು…..

 ವರದಿ:- ಸಜೀಶ ಲಂಬುನೋರ್ 

WhatsApp Group Join Now
Telegram Group Join Now
Share This Article
error: Content is protected !!