Ad imageAd image

ಆರ್ ಡಿ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ.

Bharath Vaibhav
ಆರ್ ಡಿ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ.
WhatsApp Group Join Now
Telegram Group Join Now

ಚಿಕ್ಕೋಡಿ:- ನಿನ್ನೆ ಸಾಯಂಕಾಲ ಚಿಕ್ಕೋಡಿ ಆರ ಡಿ ಹೈಸ್ಕೂಲ್ ಮೈದಾನದಲ್ಲಿ ಶ್ರೀ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಚಾರ ಮಾಡಲಾಯಿತು.ಲೋಕಸಭಾ ಚುನಾವಣೆ ಅಖಾಡ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ.

ಕರ್ನಾಟಕ ಕಾಂಗ್ರೆಸ್ ಮುಖಂಡರು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಚಾರ ಕಾರ್ಯಕ್ರಮ ನಡೆಯಿತು.ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಒಂದು ಲಕ್ಷದಕ್ಕಿಂತ ಹೆಚ್ಚು ಮತಗಳಿಂದ ಆರಿಸಿ ಕೊಡುವ ಜವಾಬ್ದಾರಿ ನಿಮ್ಮದು ಎಂದ ಸಿದ್ದರಾಮಯ್ಯ.

ಈ ಪ್ರಚಾರದಲ್ಲಿ ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳನ್ನು ಪೂರ್ಣ ಗೊಳಿಸುವ ಕುರಿತು ಶ್ರೀ ಸಿದ್ದರಾಮಯ್ಯ ಅವರು ಒಂದು ಗಂಟೆಯ ಭಾಷಣ.ಮೋದಿ ಮಾಡಿರುವ ಎಲ್ಲಾ ಗ್ಯಾರಂಟಿಗಳು ಸುಳ್ಳು ಮತ್ತು ವಿಫಲ ಎಂದ ಸಿದ್ದರಾಮಯ್ಯ.

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಗ್ಯಾರಂಟಿ ಎಂದು ಸಿದ್ದರಾಮಯ್ಯ.ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ರೈತರ ಸಾಲ ಮನ್ನಾ ಎಂದ ಸಿದ್ದರಾಮಯ್ಯ.

ಯಾವುದೇ ಯೋಚನೆ ಮಾಡದೆ ಮನೆಯಲ್ಲಿ ಯಾರು ನಿಲ್ಲದೆ ಮತಗಟ್ಟೆಗಳಿಗೆ ಹೋಗಿ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದ ಸಿದ್ದರಾಮಯ್ಯ ಅವರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ, ಲೋಕಉಪಯೋಗ ಇಲಾಖೆ ಸಚಿವರಾದ ಸತೀಶ್ ಜಾರಕಿಹೋಳಿ, ರಾಹುಲ್ ಜಾರಕಿಹೋಳಿ, ಎಂಎಲ್ಸಿ ಯಾದ ಪ್ರಕಾಶ್ ಹುಕ್ಕೇರಿ, ಶಾಸಕರಾದ ಗಣೇಶ್ ಹುಕ್ಕೇರಿ, ಕರ್ನಾಟಕದ ಎಲ್ಲ ಕಾಂಗ್ರೆಸ್ ಮುಖಂಡರು ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಚಾರ ಕಾರ್ಯಕ್ರಮ ನಡೆಯಿತು.

ವರದಿ ರಾಜು ಮುಂಡೆ 

 

WhatsApp Group Join Now
Telegram Group Join Now
Share This Article
error: Content is protected !!