Ad imageAd image

ಕಟುಕ ಹೃದಯಿಗಳು ನಾವಲ್ಲ, ಬಿಜೆಪಿಯವರು : ಡಿ. ಕೆ ಸುರೇಶ್

Bharath Vaibhav
ಕಟುಕ ಹೃದಯಿಗಳು ನಾವಲ್ಲ, ಬಿಜೆಪಿಯವರು : ಡಿ. ಕೆ ಸುರೇಶ್
WhatsApp Group Join Now
Telegram Group Join Now

ಬೆಂಗಳೂರು: ಬೆಂಗಳೂರು ಗ್ರಾಮಾಂತರಕ್ಕೆ ಹೃದಯವಂತರು ಬರುತ್ತಿದ್ದಂತೆ ಹೃದಯವಿಲ್ಲದ ಕಟುಕರು ಡಿ.ಕೆ.ಸುರೇಶ್ ಕಾಣೆಯಾಗಿದ್ದಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿರುವ ಡಿ.ಕೆ.ಸುರೇಶ್, ಕಟುಕ ಹೃದಯಿಗಳು ನಾವಲ್ಲ, ಬಿಜೆಪಿಯವರು ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, ನಾನು ಪಲಾಯನವಾದಿಯಲ್ಲ. ಆರ್.ಅಶೋಕ್ ಗೆ ನನ್ನ ಬಗ್ಗೆ ಕಮೆಂಟ್ ಮಾಡುವ ಯೋಗ್ಯತೆ ಇಲ್ಲ ಎಂದು ಗುಡುಗಿದರು.

ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಕೇಂದ್ರದ ಬಿಜೆಪಿ ಸರ್ಕಾರ ಬರ ಪರಿಹಾರವನ್ನೂ ನೀಡುತ್ತಿಲ್ಲ, ಅಕ್ಕಿಯನ್ನೂ ನೀಡುತ್ತಿಲ್ಲ. ಕಟುಕ ಹೃದಯವಿರುವುದು ಬಿಜೆಪಿಯವರಿಗೆ ಹೊರತು ಜನರಿಗೆ ಉತ್ತಮ ಯೋಜನೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನವರಿಗಲ್ಲ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ನಾನು ಮಾಡಿದ ಕೆಲಸಗಳು ಜನರಿಗೆ ಗೊತ್ತಿದೆ. ಜನ ಯಾವುದನ್ನೂ ಮರೆತಿಲ್ಲ. ಜನರ ಸಂಕಷ್ಟವನ್ನು ಅರ್ಥಮಾಡಿಕೊಂಡು ಅವರಿಗೆ ನೆರವಾಗುವ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಎಂದು ಹೇಳಿದರು.

WhatsApp Group Join Now
Telegram Group Join Now
Share This Article
error: Content is protected !!