Ad imageAd image

ಅಂಧ ವಿದ್ಯಾರ್ಥಿ ಕೃಷ್ಣಾ ಬನ್ನಿದಿನ್ನಿಗೆ ಚಲನಚಿತ್ರ ನಿರ್ಮಾಪಕ ಘನಶ್ಯಾಮ್ ಭಾಂಡಗೆ ಸನ್ಮಾನ

Bharath Vaibhav
ಅಂಧ ವಿದ್ಯಾರ್ಥಿ ಕೃಷ್ಣಾ ಬನ್ನಿದಿನ್ನಿಗೆ ಚಲನಚಿತ್ರ ನಿರ್ಮಾಪಕ ಘನಶ್ಯಾಮ್ ಭಾಂಡಗೆ ಸನ್ಮಾನ
WhatsApp Group Join Now
Telegram Group Join Now

ಬಾಗಲಕೋಟೆ:- ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಶ್ರೀಕೃಷ್ಣಾ ಶಿವಾನಂದ ಬನ್ನಿದಿನ್ನಿ, ಈತನು ಶೇ. 91 ಅಂಕಗಳನ್ನು ಪಡೆದು ಅಂಧರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಂಗುಲಾಬಿ ಹಾಗೂ ಇಂಗಳೆ ಮಾರ್ಗ ಚಲನಚಿತ್ರ ನಿರ್ಮಾಪಕ ಘನಶ್ಯಾಂ ಭಾಂಡಗೆಯವರು ಮತ್ತಿಕಟ್ಟಿ ಗ್ರಾಮದ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯ ತಂದೆ ತಾಯಿ ಹಾಗು ಕುಟುಂಬಸ್ಥರು ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!