Ad imageAd image

ಜಗದೀಶ್ ಶೆಟ್ಟರ್ ಅವರಿಗೆ ಆಶೀರ್ವದಿಸಿದ ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು

Bharath Vaibhav
WhatsApp Group Join Now
Telegram Group Join Now
  1. ಬೆಳಗಾವಿ: ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ಹಾಗೂ ಇನ್ನಿತರೆ ಮಠಾಧೀಶರು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಭೇಟಿ ಮಾಡಿ ಗೆಲುವು ನಿಮ್ಮದಾಗಲಿದೆ ಎಂದು ಆರ್ಶಿವಾದಿಸಿದರು.‌

ರವಿವಾರ ಸಂಸದೆ ಮಂಗಲಾ ಅಂಗಡಿ ನಿವಾಸಕ್ಕೆ ಆಗಮಿಸಿ, ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದರು. ಈ ವೇಳೆ ಜಗದೀಶ್ ಶೆಟ್ಟರ್ ಅವರು ಸ್ವಾಮಿಗಳನ್ನು ಆತ್ಮಿಯವಾಗಿ ಸನ್ಮಾನಿಸಿ ಆಶಿರ್ವಾದ ಪಡೆದರು. ಈ ವೇಳೆ ಜಗದೀಶ್ ಶೆಟ್ಟ‌ರ್ ಅವರಿಗೆ ಈ ಚುನಾವಣೆಯಲ್ಲಿ ಒಳ್ಳೆಯದಾಗುತ್ತದೆ ಎಂದು ಸ್ವಾಮಿಜೀಗಳು ಆಶೀರ್ವಾದ ಮಾಡಿದ್ದಾರೆ.

ಈ ವೇಳೆ ಕಿತ್ತೂರು ಕಲ್ಮಠದ ಶ್ರೀಗಳು, ಹೊಸುರು ಮಡಿವಾಳೇಶ್ವರ ಮಠದ ಶ್ರೀಗಳು, ಅಂಕಲಗಿಮಠದ ಶ್ರೀಗಳು, ಮುಕ್ತಿಮಠದ ಶ್ರೀಗಳು, ಮುತನಾಳ ಶ್ರೀಗಳಿಗು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ :- ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!