Ad imageAd image

ಚೇಂಬರ್ಸ್ ಆಫ್ ಕಾಮರ್ಸ್ ನಲ್ಲಿ ಸಭೆ: ಜಗದೀಶ್ ಶೆಟ್ಟರ್ ಗೆ ಶಾಸಕ ಅಭಯ್ ಪಾಟೀಲ್ ಸಾಥ್

Bharath Vaibhav
ಚೇಂಬರ್ಸ್ ಆಫ್ ಕಾಮರ್ಸ್ ನಲ್ಲಿ ಸಭೆ: ಜಗದೀಶ್ ಶೆಟ್ಟರ್ ಗೆ ಶಾಸಕ ಅಭಯ್ ಪಾಟೀಲ್ ಸಾಥ್
WhatsApp Group Join Now
Telegram Group Join Now

ಬೆಳಗಾವಿ: ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಚೇಂಬರ್ಸ್ ಆಫ್ ಕಾಮರ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಮತಯಾಚನೆ ಮಾಡಿದರು ಈ ವೇಳೆ ಶಾಸಕ ಅಭಯ್ ಪಾಟೀಲ್ ಸಾಥ್ ನೀಡಿದರು.‌

ಗುರುವಾರ ಸಾಯಂಕಾಲ ಉದ್ಯಮಬಾಗನಲ್ಲಿರುವ ಚೇಂಬರ್ಸ್ ಆಫ್ ಕಾಮರ್ಸ್ ಬಲ್ಲಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಸಭೆ ಮಾಡುವ ಮೂಲಕ ಮತಯಾಚನೆ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಗುರು ಆಗುವತ್ತ ದಾಪುಗಾಲು ಹಾಕುತ್ತಿದ್ದು, ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಅವರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡಿದ್ದೇನೆ. ತಾವೆಲ್ಲರೂ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಜಗದೀಶ್ ಶೆಟ್ಟರ್ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಚಿನ ಸಭನಿಸ್, ರಾಮ್ ಭಂಡಾರಿ, ಸಿ.ಸಿ. ಹೂಂದಿನಕಟ್ಟಿ, ಆನಂದ ದೇಸಾಯಿ, ಶ್ರೀಧರ ಉಪ್ಪಿನ,ರೋಹನ ಜೂವಳಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!