Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಶೀಘ್ರ ತೆರೆ ಕಾಣಲಿದೆ ಚಿತ್ರ

Advertisement
ಜನವರಿ 17 ರಂದು ಬಿಡುಗಡೆಯಾಗಿ ಕೆಲ ವಾರಗಳ ನಂತರ ಚಿತ್ರಮಂದಿರಗಳಿಂದ ಸದ್ದಿಲ್ಲದೆ ಎತ್ತಂಗಡಿ ಆಗಿದ್ದ ಚಿತ್ರ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಹೊಸ ಆವೃತ್ತಿಯೊಂದಿಗೆ ಮರಳಲು ಸಿದ್ಧವಾಗಿದೆ. ಇದೇ ಕಥೆಯ ಜೀವಾಳ ಆಗಿದೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.

ನಾನು ಕಲ್ಪಿಸಿಕೊಂಡಂತೆ ಸಿನಿಮಾ ತೋರಿಸಲು ಆಗಿರಲಿಲ್ಲ. ಕಾನೂನು ಗೋಜಲಿನಿಂದ ಮೊದಲ ಆವೃತ್ತಿ ಚೆನ್ನಾಗಿ ಮೂಡಿಬರಲಿಲ್ಲ. ಅಂತಿಮ ಲ್ಯಾಬ್ ಆವೃತ್ತಿಯನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವಾಗ ಅಳವಡಿಸದಂತೆ ನ್ಯಾಯಾಲಯ ತಡೆಯಿತು. ಲಭ್ಯವಿರುವುದನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ತಿಳಿಸಿದರು.

ಸಿನಿಮಾ ನೋಡಿದ ವೀಕ್ಷಕರು, ದೃಶ್ಯಗಳು ಆಕಸ್ಮಿಕವಾಗಿ ಒಟ್ಟಿಗೆ ಸೇರಿಕೊಂಡಿವೆ ಎಂದು ಹೇಳಿದರು. ಅಲ್ಲದೇ, ರಾಗಿಣಿ ದ್ವಿವೇದಿ ಕೇವಲ ಒಂದು ಹಾಡನ್ನು ಹೊರತುಪಡಿಸಿ ಅವರ ಪ್ರಮುಖ ದೃಶ್ಯಗಳು ಕಾಣೆಯಾಗಿದ್ದವು. ರಂಗಾಯಣ ರಘು ಮತ್ತು ಸಂಪತ್ ರಾಜ್ ಅವರೊಂದಿಗಿನ ದೃಶ್ಯಗಳಲ್ಲಿ ಯಾವುದೇ ಭಾವನಾತ್ಮಕ ಸಂಪರ್ಕ ಇರಲಿಲ್ಲ. ಈ ಸಂಪರ್ಕವನ್ನು ಈಗ ಮತ್ತೆ ತರುತ್ತಿದ್ದೇನೆ ಎಂದರು.

ಈಗಾಗಲೇ ಬಿಡುಗಡೆಯಾಗಿದ್ದ ಆವೃತ್ತಿಯಲ್ಲಿ ಚಿತ್ರದ ಅವಧಿ 2 ಗಂಟೆ ಮತ್ತು 2 ನಿಮಿಷ ಇತ್ತು. ಈಗ ಅದನ್ನು 2 ಗಂಟೆ 23 ನಿಮಿಷಕ್ಕೆ ಹೆಚ್ಚಿಸಲಾಗಿದೆ. ಆ 20 ನಿಮಿಷ ಫಿಲ್ಲರ್ ಅಲ್ಲ. ಅದು ಆತ್ಮ. ಅದು ಇಲ್ಲದೆ, ಚಿತ್ರ ನಿರ್ಜೀವವಾಗಿತ್ತು ಎಂದು ನಾಗಶೇಖರ್ ಹೇಳಿದರು. ಸಂಜು ವೆಡ್ಸ್ ಗೀತಾ 2 ನಾಗಶೇಖರ್ ಅವರ 11 ನೇ ಚಿತ್ರವಾಗಿದೆ. ಪ್ರತಿ ಚಿತ್ರವು ಏನಾದರೊಂದು ಕಲಿಸುತ್ತದೆ. 10 ಸಿನಿಮಾ ಮಾಡಿ ಆದ ನನ್ನ ಅನುಭವವನ್ನು ಇದರಲ್ಲಿ ತಂದಿದ್ದೇನೆ. ನಾನು ಹೇಳಲು ಉದ್ದೇಶಿಸಿದ್ದನ್ನು ನಿಖರವಾಗಿ ತೋರಿಸಬೇಕಾಗದ ಅಗತ್ಯವಿದೆ ಎಂದರು.

ಮರು ಬಿಡುಗಡೆ ಮುನ್ನಾ ಇದನ್ನು ಎಸ್ ಮಹೇಂದರ್ ಮತ್ತು ಕೆಪಿ ಶ್ರೀಕಾಂತ್ ಅವರಂತಹ ಚಿತ್ರೋದ್ಯಮದ ಹಿರಿಯರಿಗೆ ತೋರಿಸಿದೆ. ಇದೊಂದು ಸುಂದರವಾದ ಚಿತ್ರ. ಇದನ್ನು ನೋಡಬೇಕಾಗಿದೆ ಎಂದು ಅವರು ನನಗೆ ಹೇಳಿದರು. ಅದು ನನಗೆ ಪುಶ್ ನೀಡಿತು. ಶೀಘ್ರದಲ್ಲಿಯೇ ಮರು ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು ಎಂದು ಅವರು ತಿಳಿಸಿದರು. ಛಲವಾದಿ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ