ಕಲಾದಗಿ : ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆಯಲ್ಲಿ 1997 98 ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆ ಯಲ್ಲಿ ಜರುಗಿತು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್. ಆರ್. ಮನಹಳ್ಳಿ ಶಿಕ್ಷಣ ತಜ್ಞರು ಬಾಗಲಕೋಟೆ, ಅಧ್ಯಕ್ಷತೆ ಎಸ್. ವಿ.ಲಮಾಣಿ ಪ್ರೌಢಶಾಲೆಯ ಮುಖ್ಯ ಗುರುಗಳು, ಜೊತೆಗೆ ಗೌರವಾನ್ವಿತ ಸನ್ಮಾನಿತರು ಎಸ್. ಎನ್. ಹೂಗಾರ ನಿವೃತ್ತ ಶಿಕ್ಷಕರು, ಎಫ್.ವಿ. ಶಿರೋಳಕರ ನಿವೃತ್ತ ಶಿಕ್ಷಕರು, ಎಲ್ ಆರ್ ಗುದಗೆನ್ನವರ ಶಿಕ್ಷಕಿಯರು, ಎಸ್. ಬಿ. ಹೊಸಮಠ ನಿವೃತ್ತ ಶಿಕ್ಷಕಿಯರು, ಬಿ. ಎ. ಭಾಗವಾನ ನಿವೃತ್ತ ಶಿಕ್ಷಕರು, ಎಮ್ ಆರ್ ಘಾತೆ ಶಿಕ್ಷಕರು ಎಚ್ ಎನ್ ನಾಯನೇಗಲಿ ಶಿಕ್ಷಕರು, ಬಿ ಎಸ್ ಹೂಗಾರ, ಇನ್ನಿತರ ಆಡಳಿತ ಮಂಡಳಿ ಭಾಗವಹಿಸಿದ್ದರು. ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕಿಯರನ್ನು ವಿವಿಧ ಪುಷ್ಪಗಳಿಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸ್ವಾಗತ ಕೋರಿದರು.ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಆರ್. ಮನಹಳ್ಳಿಯವರು ಇಂದಿನ ಶಿಕ್ಷಣದ, ಹಾಗೂ ಈಗಿನ ಶಿಕ್ಷಣ ಪದ್ಧತಿ ಬಗ್ಗೆ ಸವಿ ವಿವರವಾಗಿ ತಿಳಿಸಿದರು ಜ್ಯೋತಿ ಬೆಳಗಿಸುವ ಮೂಲಕವಾಗಿ ಅಜ್ಞಾನವನ್ನು ಹೋಗಲಾಡಿಸುವುದಕ್ಕಾಗಿ ಸಾಂಕೇತಿಕವಾಗಿ ಜ್ಯೋತಿಯನ್ನು ಹಚ್ಚುತ್ತೇವೆ ಆಗ ನಮ್ಮ ಬದುಕಿನಲ್ಲಿ ಜ್ಯೋತಿಯನ್ನು ಒತ್ತುಸುವಂತಿವೆ ಆ ಬೆಳಕಿನಲ್ಲಿ ನಮ್ಮ ಜೀವನವನ್ನು ಬೇಕಾಗಿರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮ ವನ್ನು ಇಮ್ತಿಯಾಜ್ ಜುಮ್ಮನಾಳ ಹಾಗೂ ಶ್ರೀಕಾಂತ್ ಶೆಟ್ಟೆಪ್ಪನವರ ನಿರೂಪಿಸಿದರು.
ವರದಿ : ಬಸವರಾಜ ಪೂಜಾರಿ

