Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅದ್ದೂರಿಯಾಗಿ ನಡೆದು ಸಂಪನ್ನವಾದ ವೀರಾಪುರದ 6 ನೇ ವರ್ಷದ ಕೇದಾರಲಿಂಗೇಶ್ವರನ ಜಾತ್ರೋತ್ಸವ

Advertisement
ಕಿತ್ತೂರು:ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದ ಐತಿಹಾಸಿಕ ದೇವಸ್ಥಾನ ಶ್ರೀ ಕೇದಾರಲಿಂಗೇಶ್ವರ ದೇವಸ್ಥಾನದ ಏಕೊರಾಮದ್ಯರ 6 ನೇ ವರ್ಷದ ಜಾತ್ರೋತ್ಸವ ಅದ್ದೂರಿಯಾಗಿ ನಡೆದು ಸಂಪನ್ನಗೊಂಡಿತು.

ಈ ಜಾತ್ರೋತ್ಸವದ ಕಾರ್ಯಕ್ರಮ ವನ್ನು ಕೇದಾರಪೀಠದ ಶಾಖಾ ಮಠಗಳಾದ ಮುತ್ನಾಳ, ಬೆಟಸುರ ಹಾಗೂ ವೀರಾಪುರ ಗ್ರಾಮಗಳ ಶಾಖಾ ಮಠಗಳ ಪೀಠಾಧ್ಯಕ್ಷರು ಆದ ಶ್ರೀ ಶಿವಾನಂದ ಶಿವಾಚಾರ್ಯಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಪೂಜ್ಯ ದೇವರ ಶಿಗಿಹಳ್ಳಿ ಮಡಿ ವಾಳೇಶ್ವರ ಮಠದ ಶ್ರೀಗಳು, ಕುಲವಳ್ಳಿ ಯೋಗಾಶ್ರಮದ ಓಂ ಗುರೂಜಿ ಹಾಗೂ ತುರುಮುರಿ ಶಾಂತಯ್ಯ ಸ್ವಾಮಿಗಳು ಹಾಗೂ ವೀರಾಪುರ ಗ್ರಾಮದ ಸಿದ್ರಾಮಯ್ಯ ಹಿರೇಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರು, ಕಾಂಗ್ರೆಸ್ ಮುಖಂಡರು ಆದ ಶ್ರೀ ಶಂಕರ ಹೊಳಿ, ಬಸನಗೌಡ ಸಿದ್ರಾಮಣಿ , ಕಿತ್ತೂರು ಸಿ.ಪಿ.ಐ ಶಿವಾನಂದ ಗುಡಗನಟ್ಟಿ ರೈತ ಮುಖಂಡ ಬಸವರಾಜು ಮೊಕಾಶಿ, ಹಿರಿಯ ಶಿಕ್ಷಕ ಡಾ. ಶೇಖರ್ ಹಲಸಗಿ , ಗ್ರಾಪಂ ಅಧ್ಯಕ್ಷ ಅಲಿ ಸಾಬ್ ತಳಗಡೆ ಹಾಗೂ ಕೇದಾರ ಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಕೀರ ಗೌಡ ಪಾಟೀಲ್, ಹಿರಿಯ ಶಿಕ್ಷಕ ರುದ್ರಗೌಡ ನಂದಿಹಳ್ಳಿ, ಚನ್ನಬಸಯ್ಯ ಗುಂಡಕಲ್, ಜಾತ್ರಾ ಕಮಿಟಿ ಉಪಾಧ್ಯಕ್ಷ ಉತ್ತಮ ಅಂಬಡಗಟ್ಟಿ, ಆರಾಧಕರು ಬಸವರಾಜು ಹಿರೇಮಠ, ಅಡಿವೆಪ್ಪ ತಳವಾರ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಈ ಜಾತ್ರೋತ್ಸವ ಉದ್ಘಾಟನೆ ಗೊಂಡಿತು, ಇದೇ ಸಂದರ್ಭದಲ್ಲಿ ರೇಣುಕಾಚಾರ್ಯರ ಜಯಂತಿಯನ್ನು ರೇಣುಕಾಚಾರ್ಯರ ಬಾವಚಿತ್ರ ಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ 2025 ರ ಕೇದಾರ ನಾಥ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಸಂಜೆ 7 ಘಂಟೆಯಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ವಿವಿಧ ಕ್ರೀಡಾಸಂಘಗಳ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ರಾತ್ರಿ 10 ಘಂಟೆಯಿಂದ ತಡ ರಾತ್ರಿಯವರೆಗೂ ರಸ ಮಂಜರಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಾತ್ರೋತ್ಸವ ಸಮಿತಿ ಅಧ್ಯಕ್ಷರು ಆದ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಈ ಜಾತ್ರೆ ವಿಶೇಷತೆ ಬಗ್ಗೆ ಭರ್ಜರಿಯಾಗಿ ಮಾತನಾಡಿದರು. ಸಂಗೀತ ಕಾರ್ಯಕ್ರಮದ ಉದ್ಘಾಟನೆಯನ್ನು ಕಿತ್ತೂರು ಸಿ.ಪಿ.ಐ ಶಿವಾನಂದ ಗುಡುಗನಟ್ಟಿ ದೇವರ ಹಾಡನ್ನು ಹಾಡುವ ಮೂಲಕ ಉದ್ಘಾಟನೆ ಮಾಡಿದರು. ರಸ ಮಂಜರಿ ಕಾರ್ಯಕ್ರಮ ಕಲಾವಿದರು ನೆರೆದಿದ್ದ ಅಪಾರವಾದ ಜನಸ್ತೋಮಕ್ಕೆ ಮನರಂಜನೆ ನೀಡಿದರು. ಒಟ್ಟಾರೆ ಅದ್ದೂರಿಯಾಗಿ ಯಶಸ್ವಿಯಾಗಿ 6 ನೇ ವರ್ಷದ ಕೇದಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನ ಗೊಂಡಿತು.

ವರದಿ: ಬಸವರಾಜು
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ