Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ಸಾಧನೆಗೆ ವಯಸ್ಸಿನ ಮೀತಿ ಇಲ್ಲ' ಮನಸ್ಸು ಮಾಡುವ ಅಗತ್ಯವಿದೆ

Advertisement
ಬೆಳಗಾವಿ: ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎಂಬುದು ಹಲವು ಬಾರಿ ಸಾಭೀತಾಗಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು. ಇಲ್ಲಿ ತಮಗಾಗಿ ಮತ್ತೊಂದು ಉತ್ತಮ ಉದಾಹರಣೆಯನ್ನು ನೀಡುತ್ತಿದ್ದೇವೆ. ಬಹುತೇಕ ಪರುಷರು 65 ವರ್ಷ ಎಂದರೆ ಕೈಚೆಲ್ಲಿ ಕುಳಿತುಕೊಳ್ಳುವುದು ಸಾಮಾನ್ಯ.  ಅಷ್ಟೇ ಅಲ್ಲ 65  ಎಂದರೆ ಮುಗಿದೇ ಹೋಯಿತು ಎನ್ನುವವರೇ ಹೆಚ್ಚು.

ಆದರೆ ಇಲ್ಲೊಬ್ಬ ಆಸಾಮಿ 65  ವಯಸ್ಸಿನಲ್ಲಿಯೇ ಪ್ರಚಂಡ ಸಾಧನೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ. ಕೊಲೋನೆಲ್ ಹ್ಯಾರ್ಲೆಂಡ್ ಸಾಂಡೇರ್ಸ್ ಇಂಥದೊಂದು ಅದ್ಭುತ ಸಾಧನೆ ಮಾಡಿದ  ಅಪ್ರತಿಮ ಸಾಧಕ. ಜೀವನದೂದ್ದಕ್ಕೂ ವೈಫಲ್ಯವನ್ನೇ ಕಂಡ 65 ವರ್ಷ ವಯಸ್ಸಿನ ಸಾಂಡೇರ್ಸ್ ತಾನು ಬಹು ದಿನಗಳಿಂದ ಮಾಡಿಕೊಂಡು ಬರುತ್ತಿದ್ದ ರೆಸ್ಟೋರೆಂಟ್ ದಂಧೆ ಕೈಕೊಟ್ಟಿತು.  ರೆಸ್ಟೊರೆಂಟ್ ಬಾಗಿಲು ಮುಚ್ಚಿಕೊಂಡಿತು.

ಆಗಲೂ ಅವರು ಸೋಲಲಿಲ್ಲ. ಕೈಚೆಲ್ಲಿ ಕೂರಲಿಲ್ಲ.  ತೀರಾ ಅತ್ಯಲ್ಪ ಕೆಲಸದಿಂದ ತಮ್ಮ ತುತ್ತಿನ ಚೀಲವನ್ನು ತುಂಬಿಕೊಂಡ ಕೊಲೋನೆಲ್ ಹ್ಯಾರ್ಲೆಂಡ್ ಸಾಂಡೇರ್ಸ್ ನಂತರ ಫ್ರೈಡ್ ಚಿಕ್ಕನ್ ದಂಧೆ ಶುರು ಮಾಡಿಕೊಂಡರು. ಅದು  ಆರಂಭದಲ್ಲಿ ಯಶಸ್ಸು ತಂದುಕೊಡಲಿಲ್ಲ. ಫ್ರೈಡ್ ಚಿಕ್ಕನ್ ತಯಾರಿಸಿ  ಬಂಡಿಯಲ್ಲಿ ಇರಿಸಿಕೊಂಡು ರೆಸ್ಟೊರೆಂಟ್ ಗಳನ್ನು ಸುತ್ತಿದ್ದೆ ಸುತ್ತಿದ್ದು. ಬರೋಬ್ಬರಿ 10,10 ಮಂದಿ ರೆಸ್ಟೊರೆಂಟ್ ಮಾಲೀಕರು ಇವರ ಚಿಕನ್ ಖರೀದಿಸಲು ನಿರಾಕರಿಸಿದರು. ಆದರೂ ಅವರು ಸೋಲಲಿಲ್ಲ. 10,11 ನವರು ಅಂತಿಮವಾಗಿ ಎಸ್ ಎಂದು ಅವರ ಚಿಕನ್ ಖರೀದಿಸಿದ  ನಂತರ ಸಾಂಡೇರ್ಸ್ ದಂಧೆ ದಿನ ದಿನಕ್ಕೂ ಬೆಳೆಯುತ್ತ ಹೋಯಿತು.

ಸಾವಿರಾರು ಹೊಟೇಲ್ ಗಳಿಗೆ ದಿನನಿತ್ಯ ಫ್ರೈಡ್ ಚಿಕನ್ ಪೂರೈಸುತ್ತ ತಮ್ಮ ದಂಧೆಯನ್ನು ನಿರೀಕ್ಷಿಸಲಾರದಷ್ಟು ವೇಗವಾಗಿ ಬೆಳೆಸಿಕೊಂಡರು. ಕೈಲಾಗದು ಎಂದು ಕೈಕಟ್ಟಿ ಕುಳಿತರೇ ಸಾಗದು ಕೆಲಸವೂ ಮುಂದೆ ಎನ್ನುವಂತೆ 65 ನೇ ವಯಸ್ಸಿನಲ್ಲಿಯೂ ಅಪ್ರತಿಮ ಸಾಧನೆ ಮಾಡಿದ ಸಾಂಡೇರ್ಸ್ ಯಶಸ್ವಿಗೆ ಬ್ಯುಸಿನೆಸ್ ಮೆನ್ ಆಗಿ ಬದಲಾದರು. ಅದಕ್ಕೆ ಹೇಳುವುದು ಮನಸ್ಸಿದ್ದರೆ ಮಾರ್ಗ ಎಂದು. ಸಾಧನೆಗೆ ವಯಸ್ಸಿನ ಮೀತಿ ಇಲ್ಲ ಮನಸ್ಸಿನ ಮಿತಿ ಇದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ