
ಗ್ರಾಮದ ಭಕ್ತರಾದ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಯಲ್ಲಪ್ಪ ಮಿರ್ಜಿ ಹಾಗೂ ಅವರ ಕುಟುಂಬಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು ರಾತ್ರಿ ಅನ್ನ ಪ್ರಸಾದ ಅರ್ಪಿಸಿದರು ನಂತರ ಜೇವರ್ಗಿ ನಾಟ್ಯ ಸಂಘ ಕಲಾವಿದರಿಂದ ಸತ್ಯ ಸತ್ತಿಲ್ಲ ಎಂಬ ಸುಂದರ ಸಾಮಾಜೀಕ ಕಂಪನಿ ನಾಟಕ ಜರುಗಿತು.

ಗುರುವಾರ ಮುಂಜಾನೆ ಅಪ್ಪಯ್ಯ ಸ್ವಾಮಿಗಳ ಪಲ್ಲಕ್ಕಿಯು ದೇವಸ್ಥಾನಕ್ಕೆ ತಲುಪಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಿ ಎಸ್ ನೇಮಗೌಡ ಶಿವಾನಂದ ಸಿಂಧೂರ ಮುಖಂಡರಾದ ಅಪ್ಪಸಾಬ ಪಾಟೀಲ ಗುರಪ್ಪ ಬಿರಾದರ ಬೈರು ಬಿಜ್ಜರಗಿ ಗ್ರಾ ಪಂ. ಸದಸ್ಯರಾದ ರವೀಂದ್ರ ಹಾಲಳ್ಳಿ ಸುರೇಶ ಬಿಜ್ಜರಗಿ ಶ್ರೀಸೈಲ ಮಿರ್ಜಿ ಸೇರಿದಂತೆ ಗ್ರಾಮದ ಸರ್ವ ಭಕ್ತರು ಆಗಮಿಸಿ ದೇವ ದರ್ಶನ ಪಡೆದರು.

