ವಡಗೇರಾ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಐಕೂರು ಗ್ರಾಮ ಪಂಚಾಯತಿಗೆ ಕಿವಿ ಮತ್ತು ಹೃದಯ ಎರಡೂ ಇಲ್ಲ. ಯಾದಗಿರಿ ಸಿಇಓ ಅವರ ಜವಬ್ದಾರಿಗಳೇನೋ ನಮಗಂತೂ ಅರ್ಥವಾಗುತ್ತಿಲ್ಲ.
[video width="848" height="478" mp4="https://bharathvaibhav.com/wp-content/uploads/2025/05/WhatsApp-Video-2025-05-25-at-8.24.52-AM.mp4"][/video]
ಈ ಕುರಿತು ಇಓ ಅವರೊಂದಿಗೆ ಮಾತನಾಡಿದರೂ ಪ್ರಯೋಜನೆ ಇಲ್ಲ. ರಾಜ್ಯದಲ್ಲಿ ಆಡಳಿತದಲ್ಲಿರುವುದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ ಅನ್ನುವ ಭಾವನೆಯೇ ಯಾರಲ್ಲೂ ಮೂಡುತ್ತಿಲ್ಲ. ಈ ಕ್ಷೇತ್ರದ ಶಾಸಕ ಚೆನ್ನಾರಡ್ಡಿ ಕೇವಲ ಚುನಾವಣೆಯ ಶಾಸಕನಂತಾಗಿದೆ. ಗ್ರಾಮದ ಸಮಸ್ಯೆಗಳನ್ನು ಸ್ಥಳೀಯವಾಗಿ ಮೊದಲು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ತರಬೇಕಿರುತ್ತದೆ, ತಂದರೆ ಹಾರಿಕೆಯ ಉತ್ತರ. ಮೇಲಾಧಿಕಾರಿ ಇಓ ಅವರ ಗಮನಕ್ಕೆ ತರಬೇಕಿರುತ್ತದೆ, ಅಲ್ಲೂ ಏಮಾರಿಸುವಿಕೆ!
[video width="848" height="478" mp4="https://bharathvaibhav.com/wp-content/uploads/2025/05/WhatsApp-Video-2025-05-25-at-8.24.52-AM-1.mp4"][/video]
ಈಗ ಯಾರ ಗಮನಕ್ಕೆ ತಂದರೆ ಏನು ಪ್ರಯೋಜನೆ?: ಐಕೂರು ಗ್ರಾಮದ ದಲಿತ ಕೇರಿಯ ಸಮಸ್ಯೆಗಳನ್ನು ಕೇಳುವವರು ಯಾರು? ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಟಕ್ಕುಂಟು ಲೆಖ್ಖಕ್ಕಿಲ್ಲ ಎಂಬಂಥಿದ್ದಾರೆ. ಜನ ಯಾರಿಗೆ ದೂರು ನೀಡಬೇಕು?
ಈ ಪ್ರಶ್ನೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಯಾದಗಿರಿಯ ಜನರನ್ನು ಕಾಡುತ್ತಿದೆ.
ವರದಿ: ರಾಜು ಮುಂಡೆ

