Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಿ. ಎಂ. ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

Advertisement
ಚಿಕ್ಕೋಡಿ : ಇಂದಿರಾನಗರ ಪಿ. ಎಂ. ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.

ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿ ಪಟ್ಟಣದ ಇಂದಿರಾ ನಗರ ದಲ್ಲಿರುವ ಪಿ.ಎಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಅತಿ ಅದ್ದೂರಿಯಾಗಿ ಜರುಗಿತು.

ಈ ಕಾರ್ಯಕ್ರಮ ಪ್ರತಿ ವರ್ಷ ತಪ್ಪದೇ ದರವಾಗಿ ಜರುಗುತ್ತದೆ ಈ ವರ್ಷವೂ ಕೂಡ ಸ್ವಾಗತ ಗೀತೆ ಪ್ರಾರಂಭಿಸಿ ವಿದ್ಯಾರ್ಥಿಗಳ ಪೋಷಕರು ಉಪನ್ಯಾಸಕರು ಉಪನ್ಯಾಸಕಿಯರು ಸೇರಿದಂತೆ ನಗರದ ನಾಗರಿಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಿತು.

ಈ ಕಾರ್ಯಕ್ರಮದಲ್ಲಿ ಸರಸ್ವತಿ ಫೋಟೋ ಪೂಜೆ ಮಾಡಿ ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು.

ತದನಂತರ ಸ್ಟೇಜ್ ಮೇಲೆ ಉಪಸ್ಥಿತರಿರುವ ಅತಿಥಿಗಳಿಗೆ ಹೂವು ಕುಚ್ಚು ನೀಡಿ ಸತ್ಕಾರಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಯುತ ಜಿಲ್ಲಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಚಿಕ್ಕೋಡಿ, ಎಂ ಟಿ ಜನಗೌಡರ, ಶ್ರೀ ಯುತ ನಿವೃತ ಮುಖ್ಯ ಉಪಾಧ್ಯಾಯಕರು ಎಸ್ ಆರ್ ಡೊಂಗರೆ, ಶ್ರೀಯುತ ಡಯಟ್ ಉಪನ್ಯಾಸಕರು ಚಿಕ್ಕೋಡಿ ಎಸ್. ಎ. ದೇವರುಷಿ, ಶ್ರೀ ಯುತ ಶಶಾಂತ ಕಾಂಬಳೆ ಎಸ್ ಡಿ ಎಂ ಸಿ ಅಧ್ಯಕ್ಷರು ಚಿಕ್ಕೋಡಿ, ಇವರುಗಳು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಾವುದಾದರು ಪ್ರಾಥಮಿಕ ಶಾಲೆ ಇದ್ದರೆ ಅದು ಇಂದಿರಾನಗರ ಶಾಲೆ ಮಾತ್ರ ಏಕೆಂದರೆ ಪ್ರತಿವರ್ಷ ವಾರ್ಷಿಕ ಸ್ನೇಹ ಸಮ್ಮೇಳನ ಚಿರುಪಿಲಿ ಕಲರವ ಕಾರ್ಯಕ್ರಮ ಹರ್ಷದಿಂದ ಎಲ್ಲ ವಿದ್ಯಾರ್ಥಿಗಳ ಪೋಷಕರಿಗೆ ಅದ್ಭುತವಾದ ಮನೋರಂಜನದೋoದಿಗೆ ಬಹುಮಾನಗಳನ್ನು ವಿತರಿಸಿ, ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ ಎಂದರು

ನಂತರ ಜನಗೌಡರು ಮಾತನಾಡಿ ಸಾಬಿರ ಜಮಾದಾರ ಇವರು ಸುಮಾರು ವರ್ಷಗಳಿಂದ ಪುರಸಭೆ ಸದಸ್ಯರಾಗಿ ಸತತವಾಗಿ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಇಂತಹ ಲೀಡರ್ ಸಿಗಲು ಈ ನಗರದ ಜನ ಬಹಳ ಸಂತೋಷ ವ್ಯಕ್ತಪಡಿಸುತ್ತಾರೆ ಎಂದರು ನಂತರ ಸಾಬೀರ್ ಜಮಾದಾರ್ ಇವರು ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ಸಹಾಯ ಧನ ನೀಡಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಾಬೀರ್ ಜಮಾದಾರ್ ಪುರಸಭೆ ಸದಸ್ಯರು ಚಿಕ್ಕೋಡಿ.
ಅವರ ತಾಯಿಯಾದ ಶ್ರೀಮತಿ ನೂರಜಾ ಜಮಾದಾರ್, ಈ ಶಾಲೆಯ ಮುಖ್ಯ ಉಪಾಧ್ಯಾಯಕರಾದ ಡಿಆರ್ ಚಲವಾದಿ, ಶ್ರೀಯುತ ಭಿರಡಿ ಸರ್ ಶಿಕ್ಷಣ ಸಂಯೋಜಕರು, ಶ್ರೀಯುತ ಎಸ್ಎ ಖಡ್ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರು, ತಾಲೂಕ ಕ್ಷೇತ್ರ ಸಮೂಹ ಸಂಪನ್ಮೂಲ ಶ್ರೀಮತಿ ಶಿಲ್ಪ ಹೆಚ್ಎನ್, ಶ್ರೀ ರಜಪೂತ, ಇನ್ನು ಇತರ ಎಲ್ಲ ಪೋಷಕರು ವಿದ್ಯಾರ್ಥಿಗಳು ನಗರದ ಎಲ್ಲ ಬಂಧುಬಾಂಧವರು ಈ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.

ವರದಿ : ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ