ಸಿಂಧನೂರು : ಏಪ್ರಿಲ್ 17ರಂದು ನಗರಕ್ಕೆ ಸಂವಿಧಾನ ಯುವಯಾನ ಬೈಕ್ ಜಾಥಾ ಕಲಬುರ್ಗಿ ಜಿಲ್ಲೆಯ ವಾಡಿಯಿಂದ ಏಪ್ರಿಲ್ 14 ರಿಂದ ಏಪ್ರಿಲ್ 25ರ ವರೆಗೆ ಬೈಕ್ ಜಾಥಾ ಮೂಲಕ ಸಂವಿಧಾನದ ಜಾಗೃತಿ ಎಂಬ ಯುವಯಾನ ಮೂಲಕ ಎಪ್ರಿಲ್ 17 ರಂದು ಸಿಂಧನೂರು ನಗರಕ್ಕೆ ತಲುಪಿದ ಹಿನ್ನೆಲೆಯಲ್ಲಿ ನಗರದ ಭೀಮ ಬಂಧುಗಳು ಪ್ರಗತಿಪರ ಸಂಘಟನೆ ಮುಖಂಡರು ಸಂವಿಧಾನ ಯುವ ಯಾನವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಏಪ್ರಿಲ್ 26ರಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದ ಹೈಸ್ಕೂಲ್ ಬಳಿ ನಡೆಯುವ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಭೀಮ ಬಂಧುಗಳು ಹಾಗೂ ಪ್ರಗತಿಪರ ಸಂಘಟಕರು ಚಿಂತಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು.
[video width="848" height="382" mp4="https://bharathvaibhav.com/wp-content/uploads/2025/04/WhatsApp-Video-2025-04-18-at-11.09.39-AM.mp4"][/video]
ಈ ಸಂದರ್ಭದಲ್ಲಿ, ಅಲ್ಲಮಪ್ರಭು ಪೂಜಾರಿ. ಹೆಚ್ ಎನ್. ಬಡಿಗೇರ್. ಮೌನೇಶ್ ಜಾಲವಾಡಗಿ. ನಾರಾಯಣ ಬೆಳಗುರ್ಕಿ. ಹನುಮಂತ ಹಂಪನಾಳ. ಚಿಟ್ಟಿಬಾಬು. ಬಸವರಾಜ ಬಾದರ್ಲಿ. ಬಿ ಎನ್. ಯಾರದಿಹಾಳ. ರಮೇಶ್ ಪಾಟೀಲ್ ಬೇರಿಗಿ. ಆಲಂಬಾಶ್ ಬೂದಿಹಾಳ . ಹುಲುಗಪ್ಪ ಸೋಮಲಾಪುರ. ಮುತ್ತು ಸಾಗರ್. ಮಲ್ಲಿಕಾರ್ಜುನ. ಉಮೇಶ್ ಸುಕಲ್ಪೇಟೆ. ಇನ್ನು ಅನೇಕರಿದ್ದರು.
ಬಿ ವಿ 5 ನ್ಯೂಸ್
ಬಸವರಾಜ ಬುಕ್ಕನಹಟ್ಟಿ

