ಬಾಗೇಪಲ್ಲಿ :ಪಟ್ಟಣದ ಕನಾಕಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ತಮಿಳುನಾಡಿನ ಕಂಚೀಪುರಂ ಸೀರೆ ವ್ಯಾಪರಿ ರಸ್ತೆಯ ಮುಂಭಾಗದಲ್ಲಿ ದೊಡ್ಡದಾಗಿ ತೆಲುಗು ಬ್ಯಾನರ್ ಹಾಕಿದ್ದನ್ನು ಕಂಡ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರವೇ ಹರೀಶ ನೇತೃತ್ವದಲ್ಲಿ ತೆಲುಗು ಬ್ಯಾನರನ್ನು ಚಿಂದಿ ಚಿಂದಿ ಮಾಡಲಾಯಿತ್ತು. ಈ ವೇಳೆಯಲ್ಲಿ ಕರವೇ ಹರೀಶ್ ಮಾತನಾಡಿ, ಕಂಚೀಪುರಂ ಸೀರೆ ವ್ಯಾಪಾರಿಗೆ ಸ್ಥಳಕ್ಕೆ ಕರೆಸಿ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕವಾಗಲೀ ,ಬ್ಯಾನರ್ ವಾಗಲೀ ಹಾಕಬೇಕು. ಅದು ಬಿಟ್ಡು ತೆಲುಗು ಭಾಷೆಯಲ್ಲಿ ಬ್ಯಾನರ್ ಹಾಕಿರುವುದು ಖಂಡನೀಯ ವಿಚಾರವಾಗಿದೆ. ಈ ತಕ್ಷಣವೇ ತೆಲುಗು ಬ್ಯಾನರ್ ತೆರವುಗೊಳಿಸಬೇಕು
ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ,ಕನ್ನಡಿಗನೇ ಸಾರ್ವಭೌಮ ಕನ್ನಡಿಗರಿಂದ ಕರ್ನಾಟಕದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಳ್ಳಲು ಬರುವವರು ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡ ಭಾಷೆಗೆ ಗೌರವಕೊಡಬೇಕು ಎಂದು ಎಚ್ಚರಿಕೆ ನೀಡಿದ್ದರು.
ಕಂಚೀಪುರಂ ವ್ಯಾಪಾರಿ ನನ್ನಿಂದ ತಪ್ಪಾಗಿದೆ ಕೈ ಮುಗಿದು ಕೇಳಿಕೊಳ್ಳುತ್ತೆನೆ ಕ್ಷಮಿಸಿ ಎಂದನ್ನು. ನಂತರ ಕರವೇ ಕಾರ್ಯಕರ್ತರು ತೆಲುಗು ಬ್ಯಾನರ್ ನ್ನು ಹರಿದು ಚಿಂದಿ ಚಿಂದಿ ಮಾಡಿದ್ದರು.
ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ವರದಿ:ಬಿ.ಎ.ಬಾಬಾಜಾನ್


