ಸಿಂಧನೂರು : ರಾಯಚೂರು ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಕರ್ನಾಟಕ ರೈತ ಸಂಘ (ಕೆಆರ್ಎಸ್- ಎ ಐ ಯು ಕೆ ಎಸ್) ತಾಲೂಕ ಸಮಿತಿ ಸಿಂಧನೂರು ಮಾನ್ಯ ತಹಸಿಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಾನವಿ ಸಲ್ಲಿಸಿದರು ನಂತರ ಮಾತನಾಡಿದ ಅವರು ಈ ಭಾರಿ ಮಳೆ ರೈತರಿಗೆ ಸಂಪೂರ್ಣ ಕೈ ಕೊಟ್ಟಂತೆ ಕಾಣಿಸುತ್ತದೆ ಹಾಗಾಗಿ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರತಿ ವರ್ಷ ಮೇ-ಜೂನ್ ತಿಂಗಳಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು ಮಳೆ ಬಾರದ ಕಾರಣ ಎಲ್ಲಾ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ ಈ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕರು, ಇತರೆ ಜನ ವರ್ಗದವರು ಕೃಷಿ ಚಟುವಟಿಕೆಗಳು ಇಲ್ಲದೆ ಮಂಕಾಗಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ನೆರವಿಗೆ ಬಂದು ರಾಯಚೂರು ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಪ್ರವೇಶವೆಂದು ಘೋಷಿಸಬೇಕು ಈ ವರ್ಷ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ನಿಲ್ಲಿಸಲಾಗಿದೆ ಹಾಗಾಗಿ 2002 ಕ್ಕಿಂತ ಮುಂಚೆ ಜಾರಿಯಲ್ಲಿರುವ ಹಳೆ ಮಾಧರಿಯ"ಕೂಲಿಗಾಗಿ ಕಾಳು ಯೋಜನೆ" ಪ್ರಾರಂಭಿಸಬೇಕು ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಕರಡು ಕಾಯ್ದೆ ಮತ್ತು ವಿದ್ಯುತ್ ಚೌಕಟ್ಟು ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದರ ಭಾಗವಾಗಿ ಟಾಟಾ ಕಂಪನಿಗೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡುವ ಕಾರ್ಯಕ್ಕಾಗಿ ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿವೆ. ಸರ್ಕಾರ ಯಾವ ಕಾರಣಕ್ಕೂ ಟಾಟಾ ಕಂಪನಿಗೆ ವಿದ್ಯುತ್ ಸರಬರಾಜು ಮಾಡುವ ಗುತ್ತಿಗೆಯನ್ನು ಕೊಡಬಾರದು ಒಂದು ವೇಳೆ ಗುತ್ತಿಗೆ ಕೊಟ್ಟರೆ, ರೈತರ ಪಂಪು ಸೆಟ್ಟುಗಳಿಗೆ ಮತ್ತು ಬೋರವೆಲ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ರೈತರಿಂದ ದೊಡ್ಡ ಮಟ್ಟದ ಹಣ ಲೂಟಿಗೆ ಅವಕಾಶ ಮಾಡಿದಂತಾಗುತ್ತದೆ ಸರ್ಕಾರ ಈ ಮೇಲಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸ ಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ : ಬಿಎನ್.ಯರದಿಹಾಳ ಜಿಲ್ಲಾ ಕಾರ್ಯದರ್ಶಿ ಸಿಪಿಐ ಎಂಎಲ್ ಮಾಸ್ ಲೈನ್, ರಮೇಶ್ ಪಾಟೀಲ್ ಬೇರಿಗಿ ತಾಲೂಕ ಅಧ್ಯಕ್ಷರು ಕೆಆರ್ಎಸ್, ಸೇರಿದಂತೆ ಬಸಪ್ಪ ಕಡುಬೂರು, ವೆಂಕಟೇಶ್ ಉದ್ಬಾಳ. ಗಂಗರಾಜ ಭೀಮರಾಜ ಕ್ಯಾಂಪ್, ನಿಂಗಪ್ಪ ಚಿಕ್ಕಬೇರ್ಗಿ ಬಾಲಾಜಿ ಉದ್ಬಾಳ. ಯಮನೂರಪ್ಪ ರತ್ನಾಪುರಹಟ್ಟಿ, ಖಾಜಾಸಾಬ್. ಅಸ್ಲಾಂ, ಮರಿಯಪ್ಪ ನಾಯಕ ಬೀರಗಿ. ಕರಿಯಪ್ಪ ತುರುವಿಹಾಳ, ನಿಂಗಪ್ಪ, ಲಾಲ ಸಾಬ್ ಜಿಲಾಬಿ, ಮಹಮ್ಮದ್ ಅಲಿ, ನಿಂಗಪ್ಪ ಜಿ. ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.


