Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೇಣುಕಾಸ್ವಾಮಿ ಕೊಲೆ ಕೇಸ್ : ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ, ಡಿಬಾಸ್ ಅಡ್ಮಿನ್ ಅರೆಸ್ಟ್

Advertisement

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಠಾಣೆ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವರಿಗೆ ಸಾಕ್ಷ್ಯ ಹೇಳದಂತೆ ಬೆದರಿಕೆ ಹಾಕಲಾಗಿತ್ತು.

ಈ ಬಗ್ಗೆ ಸಾಕ್ಷಿದಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸಾಕ್ಷಿಗೆ ರಕ್ಷಣೆ ನೀಡಿ ಬೆದರಿಕೆ ಹಾಕಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಕಾರ್ಯಾಚರಣೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ವೇಣು, ಸುಹಾಸ್ ಮತ್ತು ಪುನೀತ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪುನೀತ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಡಿ ಕಂಪನಿ ಫ್ಯಾನ್ಸ್ ಪೇಜ್ ನಿರ್ವಹಿಸುತ್ತಿದ್ದ. ಉಳಿದ ಆರೋಪಿಗಳು ತುಮಕೂರಿನ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯರಾಗಿದ್ದಾರೆ.

ಸಾಕ್ಷಿದಾರ ಸಂದೀಪ್ ಜೊತೆಗೆ ಮಾತನಾಡುವ ನೆಪದಲ್ಲಿ ಬಲವಂತವಾಗಿ ಕಾರ್ ನಲ್ಲಿ ಕೂರಿಸಿಕೊಂಡು ಸುತ್ತಾಡಿಸಿದ್ದರು. ದರ್ಶನ್ ವಿರುದ್ಧ ಸಾಕ್ಷ್ಯ ಹೇಳದಂತೆ ಒತ್ತಡ ಹೇರಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ರೇಷನ್ ನಲ್ಲಿ ಸಿಗಲಿದೆ ಕ್ವಾಲಿಟಿ ಅಕ್ಕಿ ರೇಣುಕಾಸ್ವಾಮಿ ಕೊಲೆ ಕೇಸ್ : ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ, ಡಿಬಾಸ್ ಅಡ್ಮಿನ್ ಅರೆಸ್ಟ್ಗುಟ್ಕಾ ಉಗುಳಲು ಬಸ್ ಕಿಟಕಿಯ ಹೊರಗೆ ತಲೆ ಹಾಕಿದ್ದ ಯುವಕ : ಟಿಪ್ಪರ್ ಬಡೆದು ರಸ್ತೆಗೆ ಬಿದ್ದ ತಲೆಜುಲೈ 10ರಂದು ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ : ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಭಾಗಿ 150 ಸ್ಥಾನಗಳನ್ನು ಗೆಲ್ಲುವ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ : ಎಂ.ಬಿ ಪಾಟೀಲಬಾಗಲಕೋಟೆಯಲ್ಲಿ ನಿಯಂತ್ರಣ ತಪ್ಪಿ ಕೃಷ್ಣಾ ನದಿಗೆ ಉರುಳಿದ ಟಿಪ್ಪರ್ : ಸಹಾಯಕ್ಕಾಗಿ ಮೊರೆ ಇಟ್ಟ ಚಾಲಕ ಫೇಕ್ ನ್ಯೂಸ್‌ನಿಂದ ಪತ್ರಿಕಾ ವೃತ್ತಿ ಹೊರಬರಬೇಕಿದೆ : ಡಿ. ಕೆ ಶಿವಕುಮಾರ್ಸಿ. ಟಿ ರವಿ ತನ್ನ ಬಾಸ್ ಎಂದ ಉಪರಾಷ್ಟ್ರಪತಿ : ವಿಡಿಯೋ ವೈರಲ್ ಬಾಣಸಂದ್ರ ಪಿಎಸಿಬಿಯಲ್ಲಿ 134 ರೈತರಿಗೆ 30 ಲಕ್ಷ ರೂ ಸಾಲ ವಿತರಣೆಹಿರಿಯ ಸಿನಿಮಾ ನಿರ್ದೇಶಕಿ ಮತ್ತು ನಟಿ ವಿಜಯಾ ಮೆಹ್ತಾ ಇನ್ನಿಲ್ಲ