Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜಕ್ಕೆ ಬಸವಣ್ಣನ ಕೊಡುಗೆ ಅಪಾರ:ಬಸವಲಿಂಗ ಪಟ್ಟದೇವರು

Advertisement
ಚಿಟಗುಪ್ಪ:ಮಾನವ ಸಮಾಜಕ್ಕೆ ಬಸವಣ್ಣನವರ ಕೊಡುಗೆ ಅಪಾರ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.

ತಾಲ್ಲೂಕಿನ ಕಂದಗೂಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವಣ್ಣನವರ ಅಶ್ವರೂಢ ಮೂರ್ತಿ ಅನಾವರಣ ಹಾಗೂ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದರು.



ಬಸವಣ್ಣನವರು ಸಾಮಾಜಿಕ ನ್ಯಾಯದ ಮೇಲೆ ಸರ್ವ ಜನಾಂಗದ ಶಾಂತಿಗೆ ಶ್ರಮಿಸಿದ ಮಹಾನ ಮಾನವತವಾದಿಗಳು.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ವಚನಗಳ ಮೂಲಕ ತಿದ್ದಿ ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಿದರು.ಕಾಯಕದಲ್ಲಿ ಶಿವನನ್ನು ಕಂಡು ಎಲ್ಲರ ಲೆಸನ್ನ ಬಯಸಿದರು.
ಬಸವಣ್ಣನವರ ಚಿಂತನೆಗಳು ಹರಡಬೇಕು.ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು.ಬಸವಣ್ಣನ ಮೂರ್ತಿಯಿಂದ ಆದರ್ಶಗಳು ಮೈಗೂಡಿಸಿಕೊಳ್ಳಬೇಕು.ಶರಣ ಸಂಘ ಮಾಡಬೇಕು.ನಿತ್ಯ ಕನಿಷ್ಠ ವಚನಗಳಾದರೂ ಪಠಿಸಬೇಕು.ಅವರ ಆದರ್ಶಗಳು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ಕೊಂಡಯ್ಯಬೇಕೆಂದು ತಿಳಿಸಿದರು.

ಬಸವಕಲ್ಯಾಣ ಮಹಾಮನೆ ಗುಣತೀರ್ಥವಾಡಿ ಪೀಠಾಧ್ಯಕ್ಷ ಬಸವಪ್ರಭು ಸ್ವಾಮಿ ಮಾತನಾಡಿ,ಬಸವಣ್ಣ ಮೂರ್ತಿ ಸ್ಥಾಪನೆ ಮಾಡಿದರೆ ಸಾಲದು,ಮೂರ್ತಿ ನೋಡುವ ಮೂಲಕ ಜೀವನ ಬದಲಾವಣೆಯಾಗಬೇಕು.ಬಸವಣ್ಣನವರ ತತ್ವಗಳು ಅಳವಡಿಕೆಯಾಗಬೇಕು ಆಗ ಮಾತ್ರ ಎಲ್ಲಡೆ ಬಸವಣ್ಣರ ಚಿಂತನೆಗಳು ಪಸರಿಸಲು ಸಾಧ್ಯವಾಗುತ್ತದೆ.ಮೌಢ್ಯಗಳನ್ನ ಹೋಗಲಾಡಿಸಬೇಕು.ಬಸವಣ್ಣನವರ ಕಲ್ಪನೆ ಕೂಡ ಅದೇ ಆಗಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಮಹಾದೇವಮ್ಮ ತಾಯಿ,ಮೈತ್ರಾದೇವಿ ತಾಯಿ,ರಾಚಪ್ಪ ಮಾಲಿ ಪಾಟೀಲ,ಸಂಗಮೇಶ ಜವಾದಿ,ಸಿದ್ದಲಿಂಗ ಸ್ವಾಮಿ,ಪ್ರಮುಖರಾದ ರಾಜಶೇಖರ್ ಪಾಟೀಲ,ಬಂಡೆಪ್ಪ ಮೂಲಗಿ, ಮಾಣಿಕರಾವ ಹೌವಶೆಟ್ಟಿ,ಶಂಕ್ರಪ್ಪ ಶೇರಿ,ಅಣೆಪ್ಪ ನಾಗನಕೇರ,ಬಸವರಾಜ ಪೊಲೀಸ ಪಾಟೀಲ ಸೇರಿ ಅನೇಕರು ಇದ್ದರು.

ವರದಿ :ಸಜೀಶ ಲಂಬುನೋರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ