Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಭಿವೃದ್ಧಿ ಕಾಣದ ಭಾತಂಬ್ರಾ ಗ್ರಾಮ

Advertisement
ಕ್ಯಾರೇ ಅನ್ನದ ಗ್ರಾಮ ಪಂಚಾಯತ ಅಧಿಕಾರಿ

ಜನಪ್ರತಿನಿಧಿಗಳು ಇದ್ದು ಎಲ್ಲದಂತೆ ಎಂದು ಅಳಲು ತೋಡಿಕೊಂಡ ಗ್ರಾಮಸ್ಥರು

ಭಾಲ್ಕಿ: ತಾಲೂಕು ಕೇಂದ್ರದಿಂದ ಬರಿ 6 ಕಿ.ಮೀ ದೂರವಿರುವ ಭಾತಂಬ್ರಾ ಗ್ರಾಮವು ಅಭಿವೃದ್ಧಿಯಿಂದ ದೂರ ಸರೆದು ಸಮಸ್ಯೆಗಳ ಗೂಡಾಗಿ ಪರಿವರ್ತನೆಯಾಗಿದೆ.

ಈ ಗ್ರಾಮವು ಸುಮಾರು 8000 ಜನಸಂಖ್ಯೆ ಹೊಂದಿದ್ದು 5 ವಾರ್ಡಗಳನ್ನು ಒಳಗೊಂಡಿರುತ್ತವೆ. ಭಾತಂಬ್ರಾ ತಾಂಡಾ ಹಾಗೂ ಆನಂದವಾಡಿ ಗ್ರಾಮಗಳು ಈ ಪಂಚಾಯತಗೆ ಸೇರಲ್ಪಟ್ಟಿರುತ್ತವೆ.

21 ಜನ ಸದಸ್ಯರು ಭಾತಂಬ್ರಾ ಗ್ರಾಮದವರಾಗಿದ್ದು, 2 ಜನ ಸದಸ್ಯರು ಮಾತ್ರ ಪಕ್ಕದ ಆನಂದವಾಡಿ ಗ್ರಾಮದವರಾಗಿರುತ್ತಾರೆ.

ಪಿಡಿಓ ಅವರು ಗ್ರಾಮದ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲಾ ಎನ್ನುವುದು ಗ್ರಾಮಸ್ಥರ ನೇರ ಆರೋಪ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳುಗಳೆ ಕಳೆದರು ಕೂಡಾ ದುರಸ್ತಿ ಭಾಗ್ಯ ಕಂಡಿಲ್ಲಾ ಇದನ್ನ ಕಂಡ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

https://youtu.be/c4bhiZS8Ed0

ಕೊಳಚೆ ನೀರು ಸಂಗ್ರಹಣೆಯಾಗಿ ಗಬ್ಬುನಾರುತ್ತಿದೆ. ಕೀಟಗಳು, ಸೊಳ್ಳೆಗಳು ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಆನಾರೋಗ್ಯದ ಪರಿಣಾಮ ಬೀರುತ್ತಿದೆ ಇದಕ್ಕೆ ಹೊಣೆಯಾರು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕತ್ತಲಾಯಿತು ಎಂದರೆ ಸಾಕು ಶುದ್ಧ ಕುಡಿಯುವ ನೀರಿನ ಘಟಕ ಪಕ್ಕದ ಅಂಗನವಾಡಿ ಕೇಂದ್ರವು ಮಲಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿದೆ.

ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ ಅನ್ನುತ್ತಿದ್ದಾರೆ ಗ್ರಾಮದ ಮಹಿಳೆಯರು.

ವಾರ್ಡಗಳಲ್ಲಿನ ರಸ್ತೆಯ ಬದಿಗೆ ನಾಳಿಗಳ ಸ್ಥಿತಿ ನೋಡಿದರೆ ಹೊಲಸು, ಕೊಳಚೆ ನೀರಿನಿಂದ ತುಂಬಿದು ಸಂಚಾರಕ್ಕೆ ಹೆಳಬಾರದ ತೊಂದರೆಯಾಗುತ್ತಿದೆ ಮಕ್ಕಳು, ವಯಸ್ಕರರು, ಹಿರಿಯ ನಾಗರಿಕರು ಆ ಸ್ಥಳದಲ್ಲಿ ಸಂಚರಿಸುವಾಗ ಕೊಳಚೆ ನೀರಿನಲ್ಲಿ ಜಾರಿ ಬಿದ್ದಿರುವ ಉದಾಹರಣೆಗಳಿವೆ.

 

ವರದಿ : ಸಂತೋಷ ಬಿಜಿ ಪಾಟೀಲ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ