ಸಿಂಧನೂರು : ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಕಾಂಗ್ರೆಸ್ ಮತ್ತು ಮಿತ್ರ ಪಕ್ಷದ ವಿರುದ್ಧ ಜನಕ್ರೋಶ ವ್ಯಕ್ತಪಡಿಸಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಅಡ್ಡಗಳು ಆಗಿರುವುದು ಖಂಡನೆಯ ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ವೇಳೆ ಬಿಜೆಪಿ ನಗರ ಘಟಕ ಅಧ್ಯಕ್ಷ ಸಿದ್ರಾಮೇಶ್ ಮನ್ನಾಪುರ. ಗ್ರಾಮೀಣ ಘಟಕ ಅಧ್ಯಕ್ಷ ವೆಂಕೋಬ್ ನಾಯಕ. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡ ಬಸವರಾಜ. ಗ್ರಾಮೀಣ ಮಹಿಳಾ ಘಟಕ ಅಧ್ಯಕ್ಷೇ ಮಾನಂದ ಛೆತ್ರಪ್ಪ. ನಗರ ಮೋರ್ಚಾ ಮಹಿಳಾ ಘಟಕ ಅಧ್ಯಕ್ಷೇ ಶಿವಮ್ಮ ಅಂಬಿಗೇರ. ಮಹಿಳಾ ಮುಖಂಡರಾದ ಪ್ರೇಮ ಸಿದ್ದಾಂತಿಮಠ. ಶೈಲಜಾ ಷಡಕ್ಷರಪ್ಪ. ಮುಖಂಡರಾದ ಕೆ. ರಾಜಶೇಖರ. ಎಸ್ ಎಸ್. ಹಿರೇಮಠ. ಲಿಂಗರಾಜ ಹೂಗಾರ್. ಮುತ್ತು ಬರ್ಸಿ. ಸಿದ್ದು ಹೂಗಾರ್. ಸಿರಾಜ್ ಪಾಷಾ. ರವಿ ರಾಠೋಡ್ ಸೇರಿದಂತೆ ಇನ್ನೂ ಅನೇಕರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ

