Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತಿಥಿ ಶಿಕ್ಷಕರ ಭರವಸೆಯನ್ನೇ ಹುಸಿ ಮಾಡಿದ ಬಜೆಟ್:ಪ್ರದೀಪ್ ಮಾಳಿ

Advertisement
ಬೆಳಗಾವಿ: ಇದು ಕೇವಲ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರಿಗೆ ಮಾತ್ರ ಐತಿಹಾಸಿಕ ಬಜೆಟ್ ಹೊರತು ಅತಿಥಿ ಶಿಕ್ಷಕರಿಗೆ ಅಲ್ಲ.

ಸುಮಾರು ದಶಕಗಳಿಂದ ಹೋರಾಟಗಳ ಮೇಲೆ ಹೋರಾಟಗಳನ್ನು ಕೈಗೊಳ್ಳುತ್ತಾ ಬಂದರೂ ಸಹ ಅತಿಥಿ ಶಿಕ್ಷಕರ ಬಾಳಿಗೆ ಬೆಳಕಾಗದೆ ಅಳುವ ಮಕ್ಕಳ ಕೈಯಲ್ಲಿ ಮಿಠಾಯಿ ನೀಡಿದಂತೆ ಅತಿಥಿ ಶಿಕ್ಷಕರ ಸಂಬಳವನ್ನು 2,000 ಸಾವಿರ ಕ್ಕೇರಿಸಿ ಸಂತೃಪ್ತಿ ಪಡಿಸಲು ಹೊರಟಿರುವ ಅಸಂವಿಧಾನಿಕ ಸರ್ಕಾರ.

ಪ್ರತಿವರ್ಷ ಅತಿಥಿ ಶಿಕ್ಷಕರಿಂದ ಸರ್ಕಾರಕ್ಕೆ ನೂರಾರು ಕೋಟಿಗಳಷ್ಟು ಲಾಭವಾದರೂ ಸಹಿತ ಕನಿಷ್ಠ ಕೂಲಿಯನ್ನು ನೀಡದ ಸರ್ಕಾರ. ಇಂತಹ ಒಂದು ಸರ್ಕಾರದ ಮೇಲೆ ಭರವಸೆಯನಿಟ್ಟು ಕರ್ನಾಟಕದ ಆದ್ಯಂತ ಸರಿ ಸುಮಾರು 43000 ಸಾವಿರ ಅತಿಥಿ ಶಿಕ್ಷಕರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಇದೇ ಕಾಂಗ್ರೆಸ್ ಸರ್ಕಾರದ ನಾಯಕರು ಬಂದು ನಮ್ಮ ಹೋರಾಟದಲ್ಲಿ ಭಾಗಿಯಾಗಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಅತಿಥಿ ಶಿಕ್ಷಕರಿಗೆ ಒಂದು ನೆಲೆ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.ಮತ್ತು ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲೂ ಸಹಿತ ಅದನ್ನ ಉಲ್ಲೇಖಿಸಿದ್ದಾರೆ.

ಇಂತಹ ನಮ್ಮ ಆಳುವ ಪ್ರಜಾಪ್ರಭುತ್ವ ಸರ್ಕಾರದ ನಾಯಕರುಗಳ ಮಾತುಗಳನ್ನು ನಂಬಿ ನಾವು ಇಡೀ ಕರ್ನಾಟಕ ರಾಜ್ಯದ್ಯಂತ 43000 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವುದು ದುಸ್ಥಿತಿಯೇ ಸರಿ.

ಬಂದಿಖಾನೆಯಲ್ಲಿ ಬಂಧಿಯಾಗಿರುವಂತಹ ಕೈದಿಗೆ ಇರುವಂತಹ ಸಂಬಳ ಒಬ್ಬ ನಾಡು ಕಟ್ಟುವ ಶಿಕ್ಷಕನಿಗಿಲ್ಲದೆ ಸರ್ಕಾರದ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವುದೇ ದುಃಖದ ಸಂಗತಿಯೇ ಸರಿ.

ಈ ಅತಿಥಿ ಶಿಕ್ಷಕ ಸಮಾಜದಲ್ಲಿ ಮಾತ್ರ ಸ್ವತಂತ್ರ ಆದರೆ ಸರ್ಕಾರದ ರೀತಿಯಲ್ಲಿ ಮಾತ್ರ ಅತಂತ್ರ.ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಕಾರ್ಯಧ್ಯಕ್ಷರು ಪ್ರದೀಪ್ ಮಾಳಿ.

ವರದಿ ರಾಜು ಮುಂಡೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ