Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಳ ಮಿಸಲಾತಿ ಜಾರಿ: ಗೋಕಾಕದಲ್ಲಿ ಮಾದಿಗರಿಂದ ಸಂಭ್ರಮಾಚರಣೆ

Advertisement
ಗೋಕಾಕ: ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮಾದಿಗರ ಒಳಮೀಸಲಾತಿ ಜಾರಿಯಾದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಾ ಮಾದಿಗರು ಪಟಾಕಿ ಹಚ್ಚಿ ಶ್ರೀ ಬಸವೇಶ್ವರ ಪುತ್ಥಳಿಗೆ ಮತ್ತು ಡಾ: ಬಿ. ಆರ್.  ಅಂಬೇಡ್ಕರ ಪುತ್ಥಳಿಗೆ ಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.

ಮಾದಿಗ ಮುಖಂಡ ಸತೀಶ ಹರಿಜನ ಮಾತನಾಡಿ ನಿನ್ನೆ ದಿನ ನಡೆದ ವಿಶೇಷ ಸಚಿವ ಸಂಪುಟದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾಂಗ್ರೇಸ್ ಸರ್ಕಾರ ಮಾದಿಗರಿಗೆ ಮಾತು ಕೊಟ್ಟಂತೆ ಒಳಮೀಸಲಾತಿ ಜಾರಿ ಮಾಡಿದ್ದು ಸಂತಸ ತಂದಿದೆ.



ಆದರೂ ಸಹ ಎಡಗೈ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಮಿಸಲಾತಿ ದೊರಕಿಲ್ಲ ಆದರೂ ಸಂತಸದ ಸುದ್ದಿಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನೀಡಿದ್ದಕ್ಕೆ ಅಬಿನಂದಿಸಿದರು. ಮಾದಿಗ ಮುಖಂಡ ವಿಠ್ಠಲ ಸಣ್ಣಕ್ಕಿ ಮಾತನಾಡಿ ನಮ್ಮ ಹಿರಿಯರ ಪ್ರಾಣ ತ್ಯಾಗ,ಹೊರಾಟದಿಂದ ಇವತ್ತು ಎಡಗೈ ಸಮಾಜದರಿಗೆ ಒಳ ಮಿಸಲಾತಿ ದೊರಕಿದೆ.

ಇನ್ಮುಂದೆ ಎಡಗೈ ಸಮಾಜದವರು ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣ ಕಲಿತು ಭವಿಷ್ಯ ಉಜ್ವಲ ಮಾಡಿಕೊಂಡಾಗ ಮಾತ್ರ ಒಳಮಿಸಲಾತಿ ತರುವ ಹೊರಾಟಕ್ಕೆ ಜಯ ಸಿಕ್ಕಿದ್ದು ಪ್ರಯೋಜನವಾಗುತ್ತದೆ ಎಂದರು.

ಇನ್ನು ಇದೆ ರೀತಿ ಬಾಳೇಶ ಸಂತವ್ವಗೋಳ ಇವರು ಎಲ್ಲ ಪಕ್ಷಗಳು ಮಾದಿಗರಿಗೆ ಒಳ ಮಿಸಲಾತಿ ನೀಡುತ್ತೇವೆಂದು ಭರವಸೆ ನೀಡಿ ಸರಕಾರ ರಚನೆಯಾದ ನಂತರ ಮರೆತು ಬಿಟ್ಟಂತೆ ಕಾಂಗ್ರೇಸ್ ಸರಕಾರ ಒಳಮಿಸಲಾತಿ ನೀಡಿ ನುಡಿದಂತೆ ನಡೆದುಕೊಂಡಿದೆ,ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾದಿಗ ಸಮಾಜದ ವತಿಂದ ಅಬಿನಂದನೆ ಹೇಳಿದರು.

ಈ ಸಂದರ್ಬದಲ್ಲಿ ಗೋಕಾಕ ತಾಲೂಕಾ ಮಾದಿಗ ಸಮುದಾಯದ ಮುಖಂಡರುಗಳಾದ ಗೊವಿಂದ ಕಳ್ಳಿಮನಿ, ಬಸವರಾಜ ಮೇಸ್ತ್ರಿ,ರಮೇಶ ಹರಿಜನ , ರವಿ ಕಡಕೋಳ,ಸಂಜು ಹೊಸಮನಿ,ದೊಡ್ಡವ್ವ ತಳಗೇರಿ.ವಿನೋದ ಮೇತ್ರಿ ಸೇರಿದಂತೆ ಇನ್ನೂಳಿದ ಮುಖಂಡರು ಹರ್ಷ ವ್ಯಕ್ತಪಡಿಸಿದರು.

ಮನೋಹರ ಮೇಗೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ