Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನಸ್ಸಿನ ಏಕಾಗ್ರತೆ ಹೆಚ್ಚಳಕ್ಕೆ ಚದುರಂಗ ಸಹಕಾರಿ : ಧನಪಾಲ್

Advertisement

ತುರುವೇಕೆರೆ : ಚದುರಂಗ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದಲ್ಲದೆ ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮನುಷ್ಯನ ಆಲೋಚನಾ ಸರಣಿಯಲ್ಲಿ ಸ್ಟಷ್ಟತೆ ಮತ್ತು ಪರಿಪೂರ್ಣತೆಗೆ ಅವಕಾಶವಾಗುತ್ತದೆ ಎಂದು ವಕೀಲ ಪಿ.ಎಚ್. ಧನಪಾಲ್ ಅಭಿಪ್ರಾಯಪಟ್ಟರು.

ಪಟ್ಟಣದ ಲಯನ್ಸ್ ಕ್ಲಬ್ ಮತ್ತು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮುಕ್ತ ಚದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತುರುವೇಕೆರೆಯಲ್ಲಿ ಆಗಿಂದಾಗ್ಗೆ ಲಯನ್ಸ್ ಕ್ಲಬ್, ಸ್ಪೋಟ್ಸ್ ಕ್ಲಬ್ ಮುಂತಾದ ಸಂಸ್ಥೆಗಳು ಚದುರಂಗ ಸ್ಪರ್ಧೆಗಳನ್ನು ನಡೆಸುತ್ತಿದ್ದು ರಾಜ್ಯದ ಗಮನವನ್ನು ಸೆಳೆದಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಆಟಗಾರರು ಇಂದು ರಾಷ್ಟ್ರಮಟ್ಟದ ಆಟಗಾರರಾಗಿ ರೂಪುಗೊಂಡಿದ್ದಾರೆ. ಇದರ ಹಿನ್ನೆಲೆಯ ಶಕ್ತಿಯಾಗಿ, ಸ್ಪೂರ್ತಿಯಾಗಿ ನಿಂತಿರುವ ನುರಿತ ಆಟಗಾರರೂ, ತರಬೇತುದಾರರೂ ಆದ ಡಾ. ನಾಗರಾಜ್ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಗ್ಲೋಬಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರೊ.ಗಂಗಾಧರ ದೇವರಮನೆ ಮಾತನಾಡಿ ಮಕ್ಕಳ ಸೃಜನಶೀಲ ಅಭಿವ್ಯಕ್ತಿಯನ್ನು ಕಾಪಾಡುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಮಕ್ಕಳು ಸ್ವಯಂಪ್ರೇರಿತರಾಗಿ ಮಾಡುವ ಕೆಲಸಗಳಿಗಿಂತ ಒತ್ತಡದ ಪರಿಸರದಲ್ಲಿ ಹೆಚ್ಚು ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಚದುರಂಗದಂತಹ ಕ್ರೀಡೆಗಳು ಮಕ್ಕಳ ಕತೃತ್ವ ಶಕ್ತಿ ಮತ್ತು ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿರುವುದರಿಂದ ಇಂತಹ ಪ್ರಯತ್ನಗಳಿಗೆ ಹೆಚ್ಚಿನ ಸಹಕಾರ ಕೊಡಬೇಕು ಎಂದರು.


ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮುಕ್ತ ವಿಭಾಗದಲ್ಲಿ ಕೆ.ಬಿ.ಕ್ರಾಸ್‌ನ ಬಸವೇಶ್, ತುಮಕೂರಿನ ದ್ರುವಲ್, ತುರುವೇಕೆರೆಯ ರವೀಂದ್ರ ಪ್ರಸಾದ್ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಸುಮಲತಾ ಪ್ರಥಮ ಬಹುಮಾನ ಪಡೆದರು. ಪ್ರಾರಂಭಿಕ ವಿಭಾಗದಲ್ಲಿ ತುರುವೇಕೆರೆಯ ತೇಜಸ್ ಗೌಡ ಪ್ರಥಮ ಬಹುಮಾನ ಪಡೆದರು.

 ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಸಿ. ಸುನಿಲ್ ಬಾಬು, ಡಾ.ನಾಗರಾಜ್, ರವಿ,  ಟಿ.ವಿ. ಮಹೇಶ್, ಟಿ.ಎನ್. ಕಾರ್ತೀಕ್ ಇತರರು ಪಾಲ್ಗೊಂಡಿದ್ದರು.


ವರದಿ : ಗಿರೀಶ್ ಕೆ ಭಟ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನಸ್ಸಿನ ಏಕಾಗ್ರತೆ ಹೆಚ್ಚಳಕ್ಕೆ ಚದುರಂಗ ಸಹಕಾರಿ : ಧನಪಾಲ್ಲಿಂಕ್ ಯೋಜನೆ ಜಾರಿಗೆ ಬಿಡುವುದಿಲ್ಲ/ ರೈತರಿಗಾಗಿ ಜೈಲಿಗೆ ಹೋಗಲೂ ಸಿದ್ದ : ಎಂ.ಟಿ.ಕೃಷ್ಣಪ್ಪನಾಮಕರಣಕ್ಕೆ ತಡವಾಗಿ ಬಂದ ಪತ್ನಿ ಹಾಗೂ ಪತ್ನಿ ಕುಟುಂಬಸ್ಥರು : ಮಗುವನ್ನ ನೆಲಕ್ಕೆ ಹೊಡೆದ ಗಂಡ ಮಾಜಿ ಯೋಧರಿಂದ 27ನೇ ಕಾರ್ಗಿಲ್ ವಿಜಯೋತ್ಸವ ಸಂಭ್ರಮ!ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನು ಬೈಕ್‌ನಲ್ಲಿ ಎಳೆದೊಯ್ದ ಪ್ರಿಯಕರ ಖಾನಾಪುರದಲ್ಲಿ ಮಹಿಳೆ ಮೇಲೆ ಚಿರತೆ ದಾಳಿಗೆ ಯತ್ನಧಾರ್ಮಿಕ ವಿಧಿವಿಧಾನಗಳ ಇಲ್ಲದೇ ಇರುವ ಮದುವೆ ಅಮಾನ್ಯ: ಹೈಕೋರ್ಟ್ "ನಿನ್ ರೇಟ್ ಎಷ್ಟು?" : ಕ್ಯಾಬ್ ಗಾಗಿ ಕಾಯುತ್ತಿದ್ದ ಮಹಿಳೆಗೆ ಬೀದಿ ಕಾಮಣ್ಣನ ಕಿರುಕುಳ ಪಾಕ್- ವಿಂಡೀಸ್ ಸಮಬಲದ ಬ್ಯಾಟಿಂಗ್ ದೇಶದಲ್ಲಿ 100 ಕೋಟಿ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವರ ಸಂಖ್ಯೆ 500ರೂಗಿಂತ ಅಧಿಕ