ಸಿಂಧನೂರು : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ದಲಿತ ಮುಖಂಡ ಭೂಮಾನಂದನ ಅಮಾನುಷ ಕೊಲೆಯ ಪೈಶಾಚಿಕ ಕೃತ್ಯವನ್ನು ಖಂಡಿಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ನಗರದ ಗಾಂಧಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟಿಸಿ ಮಾನ್ಯ ತಹಸಿಲ್ದಾರ್ ಸಿಂಧನೂರು ಅವರ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಂತರ ಅವರು ಮಾತನಾಡಿ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಆದರೆ ಈ ನೆಲದ ವಾಸ್ತವ ಏನು? ಇವತ್ತಿಗೂ ದಲಿತರು ಗೌರವದಿಂದ ಬದುಕಲು ಹೊರಟರೆ ಹಲ್ಲೆ, ಕೊಲೆ,ಅವಮಾನ, ಬೆದರಿಕೆ, ಸುಳ್ಳು ಕೇಸು, ಸಾಮಾಜಿಕ ಬಹಿಷ್ಕಾರ ಇದೇ ಅವರ ಪಾಲಾಗುತ್ತಿದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಕ್ರಾಸ್ ನಲ್ಲಿ ಆಗಸ್ಟ್ 4ರಂದು ಹದ್ದಿನಾಳ ಗ್ರಾಮದ ದಲಿತ ಮುಖಂಡ ಭೂಮಾನಂದನ ಭೀಕರ ಕೊಲೆಯು,ರಾಜ್ಯದ ದಲಿತ ಸಮಾಜದ ಮನಸ್ಸಿಗೆ ಆಳವಾದ ಗಾಯ ಮಾಡಿದೆ ದಲಿತರ ಏಳಿಗೆಯನ್ನು ಸಹಿಸದ ಜಾತಿವಾದಿಗಳು,ಪಟ್ಟ ಭದ್ರ ಹಿತಾಸಕ್ತಿಗಳು, ಕುತಂತ್ರದಿಂದ ದಲಿತರ ಮೇಲೆ ದಾಳಿ ದೌರ್ಜನ್ಯ, ಕೊಲೆ ಮಾಡುವ ಮೂಲಕ, ಭಯಾನಕ ಕೃತ್ಯ ಎಸಗಿ
ಮನುಷ್ಯರೆದೆಯಲ್ಲಿ ಭಯದ ತಲ್ಲಣಗಳನ್ನು ಸೃಷ್ಟಿಸಿ, ಶೋಷಿತರು ಆತಂಕದಲ್ಲಿ ಬದುಕುವಂಥ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ.
ಆದ್ದರಿಂದ ಕರ್ನಾಟಕ ಸರ್ಕಾರವು ಭೂಮಾನಂದನ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರವನ್ನು ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು
ಸಂದರ್ಭದಲ್ಲಿ: ಎಚ್ ಎನ್. ಬಡಿಗೇರ್. ಅಂಬ್ರುಸ್ ಕೊಡ್ಲಿ. ಮೌನೇಶ್ ಜಾಲವಾಡಗಿ. ಅಮರೇಶ್ ಗಿರಿಜಾಲಿ. ಅಲ್ಲಮಪ್ರಭು ಪೂಜಾರ್. ಶಿವರಾಜ್ ಉಪ್ಪಲದೊಡ್ಡಿ. ಹಸೇನಪ್ಪ ಸೋಲಂಗಿ. ಹನುಮಂತ ಹಂಪನಾಳ. ಮೌಲಪ್ಪ ಮಾಡಿಸಿರುವಾರ.
ಅಶೋಕ್ ಗೊರೆಬಾಳ. ಪಂಪಾಪತಿ ಹಂಚಿನಾಳ. ಪ್ರವೀಣ್ ದುಮತಿ. ಸುರೇಶ್ ಎಲೆಕೂಡ್ಲಿಗಿ. ಗುರುರಾಜ ಮುಕ್ಕುಂದ. ವೀರೇಶ್ ಹಂಚಿನಾಳ ಕೆ. ಹುಲುಗಪ್ಪ ಮಲ್ಕಾಪುರ. ನರಸಪ್ಪ ಕಟ್ಟಿಮನಿ.ರಮೇಶ್ ಬಸಾಪುರ ಸೇರಿದಂತೆ ಅನೇಕರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.


