ಹಾವೇರಿ: ಹಾವೇರಿ (Haveri )ಸವಣೂರು ತಾಲೂಕಿನ ಮಂಟಗಣಿ ಮತ್ತು ಹತ್ತಿಮತ್ತೂರು ರಸ್ತೆ ಸಾಗುವ ಮಾರ್ಗ ಮಧ್ಯದಲ್ಲಿ ಅಮಾನವೀಯ (Shocking) ಘಟನೆಯೊಂದು ನಡೆದಿದೆ.
ದುಷ್ಕರ್ಮಿಗಳು 9ಕ್ಕೂ ಹೆಚ್ಚು ಶ್ವಾನಗಳನ್ನು ಭೀಕರವಾಗಿ ಹತ್ಯೆ ಮಾಡಿ, ಅವುಗಳ ದೇಹ ಬಳಸಿ ವಾಮಾಚಾರ ನಡೆಸಿದ್ದಾರೆ.ಈ ದೃಶ್ಯ ಕಂಡು ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲ್ಲಕೋಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಶ್ವಾನಗಳ ಮೃತದೇಹಗಳು ಪತ್ತೆಯಾಗಿವೆ.
ಮೃತಪಟ್ಟವುಗಳಲ್ಲಿ ಐದು ಹೆಣ್ಣು ಹಾಗೂ ನಾಲ್ಕು ಗಂಡು ಶ್ವಾನ ಸೇರಿವೆ. ಜಮೀನುಗಳಿಗೆ ತೆರಳುವ ರಸ್ತೆ ಪಕ್ಕದಲ್ಲೇ ಈ ಘಟನೆ ನಡೆದಿದ್ದು, ಬೆಳಿಗ್ಗೆ ಹೊಲಗಳಿಗೆ ಹೊರಟಿದ್ದ ರೈತರಿಗೆ ಈ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ.


