LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ದೇಶದ ನೈಜ ಯಜಮಾನರು ದಲಿತರು ಮತ್ತು ಆದಿವಾಸಿಗಳು: ಬಿ.ಕೆ.ಹರಿಪ್ರಸಾದ್

Advertisement

ಬೆಂಗಳೂರು: ಭಾರತದ ಮೂಲ ನಿವಾಸಿಗಳಾದ ದಲಿತರು, ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯದವರೇ ಈ ನೆಲದ ನೈಜ ಯಜಮಾನರು ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. 

ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ದಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರಾಗಿ ಎಲ್ಲಪ್ಪ ಅವರು ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಸಮಾಜ ಸುಧಾರಕರಾದ ಬಿರ್ಸಾ ಮುಂಡಾ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಿ. ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಈ ದೇಶದ ನಾಯಕತ್ವ ಮತ್ತು ಮಾಲೀಕತ್ವ ಮೂಲ ನಿವಾಸಿಗಳ ಕೈ ತಪ್ಪಿ ಬೇರೆಯವರ ಪಾಲಾಗಿದೆ. ಸ್ವಾತಂತ್ರ್ಯ ಹೋರಾಟದ ಮೂಲ ಆಶಯವೇ ಎಲ್ಲರಿಗೂ ಸಮಪಾಲು ಮತ್ತು ಸಮಬಾಳು ನೀಡುವುದಾಗಿತ್ತು.

ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯದವರು ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳದೆ ಸ್ವಾವಲಂಬಿಗಳಾಗಿ ಬದುಕಬೇಕು. 

ಈ ಸಮುದಾಯಗಳ ಸಂಸ್ಕೃತಿ ಮತ್ತು ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಜಾಗತಿಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾನ್ವಿಯಲ್ಲಿ ಬೆಚ್ಚಿಬೀಳಿಸಿದ ಕೊಲೆ: ಮನೆಯಲ್ಲೇ ಯುವಕನನ್ನು ಕೊಚ್ಚಿ ಹತ್ಯೆ, ಆರೋಪಿ ಪೊಲೀಸರಿಗೆ ಶರಣುದೇಶದ ನೈಜ ಯಜಮಾನರು ದಲಿತರು ಮತ್ತು ಆದಿವಾಸಿಗಳು: ಬಿ.ಕೆ.ಹರಿಪ್ರಸಾದ್ಇನ್ನೂ 3-4 ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಆಗಬಹುದು : ಡಿ.ಕೆ ಶಿವಕುಮಾರ್ ಭವಿಷ್ಯ ಅಭ್ಯಾಸಕ್ಕಾಗಿ ಬೀದಿ ನಾಯಿಯ ಕಾಲು ಮುರಿದು, ಬಳಿಕ ಚಿಕಿತ್ಸೆ :  ವಿದ್ಯಾರ್ಥಿ ವಿರುದ್ಧ FIR ದಾಖಲು ಇಷ್ಟಲಿಂಗ ಮಹಾ ಪೂಜಾ ಮತ್ತು ಪುರಾಣ ಮಂಗಲ ಕಾರ್ಯಕ್ರಮ 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ: ಪ್ರಿಯಾಂಕ್ ಖರ್ಗೆಗಣೇಶ ಮೂರ್ತಿ ತರುವಾಗ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವಕ ಸಾವು ಕಬಡ್ಡಿ ಪಂದ್ಯಾವಳಿ : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಸ್.ಬಿ.ಜಿ. ಕಾಲೇಜಿನ ವಿದ್ಯಾರ್ಥಿಗಳುಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್‌ :ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗಿಮೊದಲ ಪತ್ನಿಗೆ ವಿಚ್ಛೇದನ ಇಲ್ಲದೇ 2ನೇ ಪತ್ನಿಗೆ ಜೀವನಾಂಶದ ಹಕ್ಕಿಲ್ಲ : ಹೈಕೋರ್ಟ್