LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಅಭ್ಯಾಸಕ್ಕಾಗಿ ಬೀದಿ ನಾಯಿಯ ಕಾಲು ಮುರಿದು, ಬಳಿಕ ಚಿಕಿತ್ಸೆ :  ವಿದ್ಯಾರ್ಥಿ ವಿರುದ್ಧ FIR ದಾಖಲು 

Advertisement

ಬೆಂಗಳೂರು: ಜೀವಗಳನ್ನು ಉಳಿಸಬೇಕಾದ ಪಶುವೈದ್ಯಕೀಯ ವಿದ್ಯಾರ್ಥಿ ಅಮಾಯಕ ಬೀದಿ ನಾಯಿಯ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹೆಬ್ಬಾಳ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ಮಾಸ್ಟರ್ ಆಫ್ ವೆಟರಿನರಿ ಸೈನ್ಸ್ (MVSc) ವಿದ್ಯಾರ್ಥಿ ಮಂಜುನಾಥ್, ತನ್ನ ವೈದ್ಯಕೀಯ ಅಭ್ಯಾಸಕ್ಕಾಗಿ ಆರೋಗ್ಯವಾಗಿದ್ದ ನಾಯಿಯ ಕಾಲನ್ನು ಉದ್ದೇಶಪೂರ್ವಕವಾಗಿ ಮುರಿದು, ಬಳಿಕ ಅದಕ್ಕೆ ಚಿಕಿತ್ಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಖಾಸಗಿ ವ್ಯಕ್ತಿಗಳ ಮೂಲಕ ಬೀದಿ ನಾಯಿಗಳನ್ನು ಹಿಡಿಸಿಕೊಂಡು, ಖಾಸಗಿ ಆಸ್ಪತ್ರೆಯಲ್ಲಿ ನಾಯಿಯ ಕಾಲನ್ನು ಮುರಿದು, ನಂತರ ಅದೇ ನಾಯಿಯನ್ನು ಹೆಬ್ಬಾಳದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಿ ವೈದ್ಯಕೀಯ ಅಭ್ಯಾಸ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸಂಶೋಧನೆಯ ನೆಪದಲ್ಲಿ ಕ್ರೌರ್ಯ: ಹೆಬ್ಬಾಳ ವೆಟರಿನರಿ ಕಾಲೇಜಿನಲ್ಲಿ ಆರ್ಥೋಪೆಡಿಕ್ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿ ಮಂಜುನಾಥ್, ತನ್ನ ಸರ್ಜರಿ ಅಭ್ಯಾಸಕ್ಕಾಗಿ ಬೀದಿ ನಾಯಿಗಳನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.

QR ಕಾಲರ್‌ನಿಂದ ಬಯಲಾದ ಪ್ರಕರಣ

ಕೆಲ ದಿನಗಳ ಹಿಂದೆ ಬೆಂಗಳೂರಿನ ದೊಡ್ಡಕಣ್ಣಹಳ್ಳಿ ಪ್ರದೇಶದಲ್ಲಿ ಒಂದು ಬೀದಿ ನಾಯಿ ಕಾಣೆಯಾಗಿತ್ತು. ನಾಯಿಗೆ ಆಹಾರ ನೀಡುತ್ತಿದ್ದವರು ಅದರ ಕುತ್ತಿಗೆಗೆ QR ಕೋಡ್ ಇರುವ ಕಾಲರ್ ಹಾಕಿದ್ದರು.

 ನಾಯಿ ಕಾಣೆಯಾದ ಬಳಿಕ QR ಕೋಡ್ ಮೂಲಕ ಅದನ್ನು ಹುಡುಕಿದಾಗ, ಅದೇ ಪ್ರದೇಶದಲ್ಲಿರುವ PrimeCare Veterinary Hospitalಗೆ ನಾಯಿ ಹೋಗಿರುವುದು ಪತ್ತೆಯಾಗಿದೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾನ್ವಿಯಲ್ಲಿ ಬೆಚ್ಚಿಬೀಳಿಸಿದ ಕೊಲೆ: ಮನೆಯಲ್ಲೇ ಯುವಕನನ್ನು ಕೊಚ್ಚಿ ಹತ್ಯೆ, ಆರೋಪಿ ಪೊಲೀಸರಿಗೆ ಶರಣುದೇಶದ ನೈಜ ಯಜಮಾನರು ದಲಿತರು ಮತ್ತು ಆದಿವಾಸಿಗಳು: ಬಿ.ಕೆ.ಹರಿಪ್ರಸಾದ್ಇನ್ನೂ 3-4 ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಆಗಬಹುದು : ಡಿ.ಕೆ ಶಿವಕುಮಾರ್ ಭವಿಷ್ಯ ಅಭ್ಯಾಸಕ್ಕಾಗಿ ಬೀದಿ ನಾಯಿಯ ಕಾಲು ಮುರಿದು, ಬಳಿಕ ಚಿಕಿತ್ಸೆ :  ವಿದ್ಯಾರ್ಥಿ ವಿರುದ್ಧ FIR ದಾಖಲು ಇಷ್ಟಲಿಂಗ ಮಹಾ ಪೂಜಾ ಮತ್ತು ಪುರಾಣ ಮಂಗಲ ಕಾರ್ಯಕ್ರಮ 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ: ಪ್ರಿಯಾಂಕ್ ಖರ್ಗೆಗಣೇಶ ಮೂರ್ತಿ ತರುವಾಗ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವಕ ಸಾವು ಕಬಡ್ಡಿ ಪಂದ್ಯಾವಳಿ : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಸ್.ಬಿ.ಜಿ. ಕಾಲೇಜಿನ ವಿದ್ಯಾರ್ಥಿಗಳುಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್‌ :ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗಿಮೊದಲ ಪತ್ನಿಗೆ ವಿಚ್ಛೇದನ ಇಲ್ಲದೇ 2ನೇ ಪತ್ನಿಗೆ ಜೀವನಾಂಶದ ಹಕ್ಕಿಲ್ಲ : ಹೈಕೋರ್ಟ್