LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ರಾಜ್ಯದಲ್ಲಿ 583ಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆ

Advertisement

ಬೆಂಗಳೂರು: ನಕಲಿ ಔಷಧಿ ಮಾರಾಟ ಜಾಲದ ಬೆನ್ನತ್ತಿದ್ದ ರಾಜ್ಯ ಆರೋಗ್ಯ ಇಲಾಖೆ, ಇದೀಗ ಯಾವುದೇ ಅಧಿಕೃತ ವೈದ್ಯಕೀಯ ಪದವಿ ಹಾಗೂ ನೋಂದಣಿ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯರು ಮತ್ತು ಅನಧಿಕೃತ ಕ್ಲಿನಿಕ್‌ಗಳ ವಿರುದ್ಧ ಕಠಿಣ ಸಮರ ಸಾರಿದೆ.

2024ರಿಂದ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆಯಲ್ಲಿ, ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಮತ್ತು ನ್ಯಾಚುರೋಪಥಿ ಹೆಸರಿನಲ್ಲಿ ಕಾನೂನುಬಾಹಿರವಾಗಿ ಚಿಕಿತ್ಸೆ ನೀಡುತ್ತಿದ್ದ 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. 

ವಿಚಾರಣೆ ವೇಳೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದ್ದು, ಪತ್ತೆಯಾದವರಲ್ಲಿ ಹೆಚ್ಚಿನವರು ಈ ಹಿಂದೆ ಆಸ್ಪತ್ರೆಗಳಲ್ಲಿ ಲ್ಯಾಬ್ ಅಸಿಸ್ಟೆಂಟ್‌ಗಳು, ನರ್ಸ್‌ಗಳು, ಕಂಪೌಂಡರ್‌ಗಳು ಹಾಗೂ ಕ್ಲಿನಿಕ್ ಸಹಾಯಕರುಗಳಾಗಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ವೈದ್ಯರ ಕೆಲಸವನ್ನು ನೋಡಿ ಸ್ವಲ್ಪ ಅನುಭವ ಪಡೆದ ನಂತರ, ಸ್ವಂತವಾಗಿ ಅನಧಿಕೃತ ಕ್ಲಿನಿಕ್‌ಗಳನ್ನು ತೆರೆದು ಜನರ ಜೀವದ ಜೊತೆ ಆಟವಾಡುತ್ತಿದ್ದರು.

ವಿಶೇಷವಾಗಿ ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ಧಾರವಾಡ ಜಿಲ್ಲೆಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ.

ಇನ್ನು ಗಡಿ ಪ್ರದೇಶ ಹಾಗೂ ಬೆಂಗಳೂರಿನಲ್ಲಿ ಕೆಲವರು ಒಂದೇ ಕಡೆ ಇರದೆ, ಮೊಬೈಲ್ ಸಂಖ್ಯೆ ಮತ್ತು ಸ್ಥಳಗಳನ್ನು ಪದೇಪದೆ ಬದಲಾಯಿಸುತ್ತಾ 'ಮೊಬೈಲ್ ಕ್ಲಿನಿಕ್' ಮಾದರಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
180 ಜೀವಂತ ಇಂಡಿಯನ್ ಸ್ಟಾರ್ ಆಮೆಗಳ ಜಪ್ತಿ; DRI ಭರ್ಜರಿ ಕಾರ್ಯಾಚರಣೆ ಹಸುವಿನ ಮೇಲೆ ಅತ್ಯಾಚಾ*ರಕ್ಕೆ ಯತ್ನ : ಸಾರ್ವಜನಿಕರಿಂದ ಸಖತ್ ಗೂಸಾಮಹಿಳೆಯರಿಗೆ ಬಾಗಿನ ಕೊಡುವ ಭಾರತೀಯ  ಹಿಂದೂ  ಸನಾತನ ಧರ್ಮದ ಪರಂಪರೆ : ಡಾ. ಸಂಗನ ಬಸಪ್ಪ ಬಿರಾದಾರ್ಬೀಳಗಿ ಸಿದ್ಧೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಕ್ಕೆ ಶಾಸಕ ಎಮ್.ಆರ್.ಪಾಟೀಲ ಚಾಲನೆ ಪ್ರಜಾ ಸೇವೆ ಆಂದೋಲನ‌ಕ್ಕೆ ಸಚಿವ ಸಂತೋಷ ಲಾಡ್ ಚಾಲನೆಆಸ್ತಿಯನ್ನು ಸಮಾನವಾಗಿ ಹಂಚಿ : ತಂದೆಯ ಮೃತದೇಹವನ್ನೇ ತಹಶೀಲ್ದಾರ್ ಕಚೇರಿಗೆ ತಂದ ಮಕ್ಕಳುರಸ್ತೆಬದಿಯಲ್ಲಿ ಕುಳಿತು ಇಡ್ಲಿ ತಿಂದ ಡಿಕೆಶಿ : ಸಿಎಂ ಸರಳತೆಗೆ ನೆಟ್ಟಿಗರು ಫಿದಾ ತಾಲ್ಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆ : ಸೌರಭ ಕಾನ್ವೆಂಟ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದ ಶಿವಣ್ಣ: ಕಿಡಿಕಾರಿದ ಕನ್ನಡಿಗರು