LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಕ್ಕೆ ಶಾಸಕ ಎಮ್.ಆರ್.ಪಾಟೀಲ ಚಾಲನೆ

Advertisement

ಕುಂದಗೋಳ: ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಕ್ಕೆ ಶಾಸಕರಾದ ಎಮ್.ಆರ್.ಪಾಟೀಲ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪಾಟೀಲ ಸರ್ಕಾರ ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗೆ ದಿನನಿತ್ಯ ಕಚೇರಿಗಳಿಗೆ ಅಲೆದಾಡಬಾರದು ಸರ್ಕಾರಿ ನೌಕರರು ವಿನಾ ಕಾರಣ ಸಾರ್ವಜನಿಕರ, ರೈತರ ಕೆಲಸಗಳನ್ನು ವಿಳಂಬ ಮಾಡದೇ ತ್ವರಿತವಾಗಿ ಕೆಲಸ ಕಾರ್ಯಗಳು ಜರುಗಬೇಕೆಂಬ ಉದ್ದೇಶದಿಂದ ಹೊಸದಾಗಿ ಜಾರಿಯಾಗಿರುವ ಈ ಪ್ರಜಾ ಇಲಾಖೆ ಇನ್ನಷ್ಟು ಶಕ್ತಿ ತುಂಬಬೇಕಾದರೆ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಈ ಒ್ರಜಾ ಆಂದೋಲನ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಸಭೆಯಲ್ಲಿ ಬರುವ ಅರ್ಜಿಗಳ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿದಾಗ ಈ ಪ್ರಜಾ ಆಂದೋಲನ ಇಲಾಖೆಗೆ ಸಂದಗೌರವ ಸಿಕ್ಕಂತಾಗುತ್ತದೆ ಎಂದು ಶಾಸಕರಾದ ಎಮ್.ಆರ್.ಪಾಟೀಲ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.

ಪಂಚಗ್ಯಾರಂಟಿ‌ ಸಮೀತಿ ಅಧ್ಯಕ್ಷ ನೆಹರೂ ಪಾಟೀಲ ಮಾತನಾಡಿ ಈ ಪ್ರಜಾ ಆಂದೋಲನ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟೀಸ್ ಕಳಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಎಮ್.ಆರ್.ಪಾಟೀಲ ಹಾಗೂ ತಹಶೀಲ್ದಾರ ರಾಜು ಮಾವರಕರ ಅವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಸುಮಾರು 16 ಅರ್ಜಿಗಳನ್ನು ಪರಿಶೀಲನೆ ಮಾಡಲಾಯಿತು. ಇದರಲ್ಲಿ ಸಂಶಿ ಗ್ರಾಮದ. ಕುಡಿಯುವ ನೀರಿನ‌ ಕೆರೆಯಲ್ಲಿ ಅಕ್ರಮ ಮಣ್ಣಿನ ಮಾರಾಟ, ಹಾಗೂ ಶಿರೂರ, ಚಾಕಲಬ್ಬಿ ಕುಡಿವ ನೀರಿನ ಶುದ್ಧ ಘಟಕಗಳನ್ನು ದುರಸ್ತಿ ಮಾಡಿಸುವ ಕುರಿತು ಜಿಲ್ಲಾ ಪಂಚಾಯತ ಸಹಾಯಕ ಅ ಧಿಕಾರಿಗೆ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ ಪ್ರಭಾರಿ ಇಒ ಶ್ರೀಮತಿ ರೇಣುಕಾ ಗಡ್ಡದವರ, ಸಿಪಿಐ ಸಮೀರ ಮುಲ್ಲಾ, ಗ್ರೇಡ್2 ತಹಶೀಲ್ದಾರ ಶೇನ್ವಿ ಹಾಗೂ ವಿವಿದ ಗ್ರಾಮಗಳಿಂದ ನೂರಾರು ಸಾರ್ವಜನಿಕರು  ಪಾಲ್ಗೊಂಡಿದ್ದರು. 
ವರದಿ;ಸುಧೀರ್ ಕುಲಕರ್ಣಿ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
180 ಜೀವಂತ ಇಂಡಿಯನ್ ಸ್ಟಾರ್ ಆಮೆಗಳ ಜಪ್ತಿ; DRI ಭರ್ಜರಿ ಕಾರ್ಯಾಚರಣೆ ಹಸುವಿನ ಮೇಲೆ ಅತ್ಯಾಚಾ*ರಕ್ಕೆ ಯತ್ನ : ಸಾರ್ವಜನಿಕರಿಂದ ಸಖತ್ ಗೂಸಾಮಹಿಳೆಯರಿಗೆ ಬಾಗಿನ ಕೊಡುವ ಭಾರತೀಯ  ಹಿಂದೂ  ಸನಾತನ ಧರ್ಮದ ಪರಂಪರೆ : ಡಾ. ಸಂಗನ ಬಸಪ್ಪ ಬಿರಾದಾರ್ಬೀಳಗಿ ಸಿದ್ಧೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಕ್ಕೆ ಶಾಸಕ ಎಮ್.ಆರ್.ಪಾಟೀಲ ಚಾಲನೆ ಪ್ರಜಾ ಸೇವೆ ಆಂದೋಲನ‌ಕ್ಕೆ ಸಚಿವ ಸಂತೋಷ ಲಾಡ್ ಚಾಲನೆಆಸ್ತಿಯನ್ನು ಸಮಾನವಾಗಿ ಹಂಚಿ : ತಂದೆಯ ಮೃತದೇಹವನ್ನೇ ತಹಶೀಲ್ದಾರ್ ಕಚೇರಿಗೆ ತಂದ ಮಕ್ಕಳುರಸ್ತೆಬದಿಯಲ್ಲಿ ಕುಳಿತು ಇಡ್ಲಿ ತಿಂದ ಡಿಕೆಶಿ : ಸಿಎಂ ಸರಳತೆಗೆ ನೆಟ್ಟಿಗರು ಫಿದಾ ತಾಲ್ಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆ : ಸೌರಭ ಕಾನ್ವೆಂಟ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದ ಶಿವಣ್ಣ: ಕಿಡಿಕಾರಿದ ಕನ್ನಡಿಗರು