Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಶ ದಿಕ್ಕುಗಳಲ್ಲಿ ದಶ ದಿವ್ಯ ಪ್ರೇಮ ದಿವಸ

Advertisement
ಸೇಡಂ: ಬಾಲ ಸಂಸ್ಕಾರ ಕೇಂದ್ರದ ದಶಮಾನೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ "ದಶ ದಿಕ್ಕುಗಳಲ್ಲಿ ದಶ ದಿವ್ಯ ಪ್ರೇಮ ದಿವಸ" ಸರಣಿಯ ಹತ್ತನೆಯ ಹಾಗೂ ಕೊನೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಶಾಲೆ ಹೂಡಾ ಭೀಮನಗರ ನಲ್ಲಿ ಜರುಗಿತು.


ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಸ್ತೂರಿ ಸೇಡಂಕರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಮಕ್ಕಳ ಜೀವನದಲ್ಲಿ ತಂದೆ ತಾಯಿಯ ಪಾತ್ರ ಬಹಳ ದೊಡ್ಡದು. ಆದರೆ ಇಂದು ಮಕ್ಕಳು ದೊಡ್ಡವರಾದ ನಂತರ ತಂದೆ ತಾಯಿಯವರನ್ನೆ ನಿರ್ಲಕ್ಷಿಸುತ್ತಿದ್ದಾರೆ. ಇದು ದುಃಖಕರ ವಿಷಯ. ಮಕ್ಕಳಲ್ಲಿ ಪಾಲಕರ ಮಹತ್ವದ ಕುರಿತು ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆಯೂ ಜರುಗಬೇಕು ಎಂದು ಹೇಳಿದರು.

ಬಾಲ ಸಂಸ್ಕಾರ ಕೇಂದ್ರದ ಸೂರ್ಯನಾರಾಯಣ ಚಿಮ್ಮನಚೋಡಕರ ಮಾತನಾಡಿ ತಂದೆ ತಾಯಿಯೆಂದರೆ ಕಣ್ಣಿಗೆ ಕಾಣುವ ದೇವರು. ತಂದೆ ತಾಯಿಗಳನ್ನು ಯಾರು ಗೌರವಿಸುವುದಿಲ್ಲವೋ ಅವರನ್ನು ಜಗತ್ತು ಸಹ ಗೌರವಿಸುವುದಿಲ್ಲ. ಇದಕ್ಕೆ ಹೆತ್ತ ತಂದೆಯನ್ನು ಜೈಲಿಗೆ ಹಾಕಿದ ಕಂಸನೇ ಸಾಕ್ಷಿ ಎಂದು ಹೇಳಿದರು . ಇಂದು ಚರಿತ್ರೆಯಲ್ಲಿ ಕಂಸನನ್ನು ಎಲ್ಲರೂ ಹೀನಾಯವಾಗಿ ಕಂಡರೆ, ಪಿತೃ ವಾಕ್ಯ ಪಾಲನೆಗಾಗಿ ರಾಜ್ಯವನ್ನೆ ತ್ಯಾಗ ಮಾಡಿದ ಶ್ರೀರಾಮನನ್ನು ದೇವರೆಂದು ಪೂಜಿಸುತ್ತಾರೆ. ಇದಕ್ಕಾಗಿ ಎಲ್ಲಾ ಮಕ್ಕಳಲ್ಲಿ ತಾಯಿ ತಂದೆಯವರ ಪ್ರಿತಿ ಪೂಜ್ಯಭಾವ ಬರಲಿ ಎಂದು ಹೇಳಿದರು.



ವೇದಿಕೆ ಮೇಲೆ ನಿವೃತ್ತ ಶಿಕ್ಷಕರಾದ ಹಣಮಂತರಾವ ಸೇಡಂಕರ, ಶಿಕ್ಷಕರಾದ ರೋಹಿತ, ಡಾ.ಶರಣಬಸ್ಸಪ್ಪಾ, ಸತ್ಯ ಯುಗ ಫೌಂಡೇಷನ್ ಅಧ್ಯಕ್ಷೆ ಶಿವಕಾಂತಮ್ಮ ಚಿಮ್ಮನಚೋಡಕರ್, ಹಿರಿಯ ಸಮಾಜ ಸೇವಕರಾದ ಗಣಪತರಾವ ಚಿಮ್ಮನಚೋಡಕರ್ ಇದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಮಕ್ಕಳು ಪಾಲಕರ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದರು. ಶಾಲೆಯ ನೂರಾರು ಮಕ್ಕಳು, ಶಿಕ್ಷಕರು ಹೂಡಾ ಗ್ರಾಮದ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ