ಮಾನ್ವಿ: ಮಾನ್ವಿ ತಾಲೂಕಿನ ದದ್ದಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಿವೃತ್ತಿ ಹೊಂದಿದ ಮುಖ್ಯಗುರು ದತ್ತಪ್ಪ ಅಲ್ಕೂರು ದಂಪತಿಗೆ ಶುಕ್ರವಾರ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಬೆಳ್ಳಿ ವಿಘ್ನೇಶ್ವರ ಮೂರ್ತಿ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿನಿಯರು ಒಂದಾಗಿ ದತ್ತಪ್ಪ ಅಲ್ಕೂರು ದಂಪತಿಗೆ ಬೆಳ್ಳಿಯ ವಿಘ್ನೇಶ್ವರ ಮೂರ್ತಿಯನ್ನು ದೇಣಿಗೆಯಾಗಿ ನೀಡಿದರು. ನಂತರ ಹಾರ ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಮುಖ್ಯಗುರು ದತ್ತಪ್ಪ ಅಲ್ಕೂರು ಅವರು ಭಾವುಕರಾಗಿ ನಮ್ಮ ದದ್ದಲ್ ಗ್ರಾಮದ ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಪ್ರೀತಿ ಕಂಡು ನನಗೆ ಏನು ಹೇಳಬೇಕೆಂದೇ ಮಾತು ಬರುತ್ತಿಲ್ಲ. ಒಂದು ಕಡೆ ದುಃಖ ಇನ್ನೊಂದು ಕಡೆ ಸಂತೋಷ. ಹಾಗಾಗಿ ನಾನು ನಿಮಗೆ ಚಿರಋಣಿಯಾಗಿ ಸದಾ ಕಾಲ ಇರುತ್ತೇನೆ. ಭಗವಂತ ನಿಮಗೆ ಆಯಸ್ಸು ಆರೋಗ್ಯ, ಐಶ್ವರ್ಯ ಮತ್ತು ಸಂಪತ್ತು ನೀಡಿ ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬೆಳ್ಳಿ ವಿಘ್ನೇಶ್ವರ ದೇಣಿಗೆ ನೀಡಿದವರಲ್ಲಿ ಅತಿಥಿ ಶಿಕ್ಷಕಿ ಸಾವಿತ್ರಿ ದದ್ದಲ್ ಅಂಗನವಾಡಿ ಶಿಕ್ಷಕಿ ಮಂಗಮ್ಮ ಮಂಗಮ್ಮ ಮೊಟ್ಲು ಸುಲೋಚನಾ ಮದ್ರಿ ಶಾರದಾ ಮುತ್ತಮ್ಮ ಮದ್ರಿ ಹಾಗೂ ವಿದ್ಯಾರ್ಥಿಗಳಾದ ರಮೇಶ ಪೋಲೀಸ್ ಮದ್ರಿ ಈರಪ್ಪ ನಾಯಕ ಎರೆಡ್ಡಿ ರಮೇಶ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಶಿಕ್ಷಕರು ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ಆಂಜನೇಯ ನಸಲಾಪುರ


